ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಮರ ಕಡಿಯುವ ವಿಚಾರದಲ್ಲಿ ಜಗಳ; ಯುವಕನ ಹತ್ಯೆ

ಜಮೀನಿನನ್ನಿದ್ದ ಮರವೊಂದನ್ನು ಸಾವಿರ ರೂಪಾಯಿಗೆ ಮಾರಾಟ ಮಾಡುವ ವಿಚಾರದಲ್ಲಿ ...

ಬೆಂಗಳೂರು: ಜಮೀನಿನನ್ನಿದ್ದ ಮರವೊಂದನ್ನು ಸಾವಿರ ರೂಪಾಯಿಗೆ ಮಾರಾಟ ಮಾಡುವ ವಿಚಾರದಲ್ಲಿ ಜಗಳವುಂಟಾಗಿ 23 ವರ್ಷದ ಯುವಕನನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ನೆಲಮಂಗಲ ಸಮೀಪ ಮಹಿಮಾಪುರದಲ್ಲಿ ವಾರದ ಹಿಂದೆ ನಡೆದಿದೆ. ಯುವಕನ ಮೃತದೇಹ ನಿನ್ನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸಿಕ್ಕಿದೆ.

ಮೃತ ಯುವಕನನ್ನು ನವೀನ್ ಎಂದು ಗುರುತಿಸಲಾಗಿದ್ದು ಈತ ಮಹಿಮಾಪುರದಲ್ಲಿ ಫೈನಾನ್ಸಿಯರ್ ಆಗಿ ಕೆಲಸ ಮಾಡುತ್ತಿದ್ದನು. ಘಟನೆಗೆ ಸಂಬಂಧಿಸಿ ಪೊಲೀಸರು ಆತನ ಸಂಬಂಧಿ ವೇಣುಗೋಪಾಲ್, ಬಂಡೆ ನವೀನ್, ತಿಮ್ಮರಾಜು, ಸುರೇಶ್ ಮತ್ತು ಚಂದ್ರಶೇಖರ್ ಎಂಬುವವರನ್ನು ಬಂಧಿಸಿದ್ದಾರೆ.

ಕಳೆದ ಭಾನುವಾರ ನವೀನ್ ಮತ್ತು ವೇಣುಗೋಪಾಲ್  ಮಧ್ಯೆ ಜಗಳವಾಗಿತ್ತು. ಮರುದಿನ ವೇಣುಗೋಪಾಲ್ ನವೀನ್ ನನ್ನು ಕಾರಿನಲ್ಲಿ ಅಪಹರಿಸಿದ್ದನು. ಆತನ ಜೊತೆ ಮೂವರು ಸ್ನೇಹಿತರಿದ್ದರು. ಕಾರಿನಲ್ಲಿ ಸಕಲೇಶಪುರಕ್ಕೆ ಕರೆದುಕೊಂಡು ಹೋಗಿ ಚೂರಿಯಿಂದ ಇರಿದು ಕೊಂದಿದ್ದಾರೆ. ಶವವನ್ನು ಕಿರಿದಾದ ಸ್ಥಳದಲ್ಲಿ ಎಸೆದು ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹವನ್ನು ಶವಪರೀಕ್ಷೆಗೆ ನೆಲಮಂಗಲಕ್ಕೆ ತರಲಾಯಿತು. ತನಿಖೆ ವೇಳೆ ವೇಣುಗೋಪಾಲ್, ಮರ ಕಡಿಯುವ ವಿಚಾರದಲ್ಲಿ ನವೀನ್ ಮತ್ತು ಆತನ ಪೋಷಕರೊಂದಿಗೆ ನಮಗೆ ಜಗಳವಾಗಿತ್ತು ಎಂದು ಬಾಯ್ಬಿಟ್ಟಿದ್ದಾನೆ. ವೇಣುಗೋಪಾಲ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

SCROLL FOR NEXT