ರೈಲ್ವೆ ಗೇಟ್ ದಾಟುವಾಗಲೇ ಧಿಡೀರನೇ ಆಗಮಿಸಿದ ಎಂಜಿನ್! ಕೂದಲೆಳೆಯಲ್ಲಿ ತಪ್ಪಿತು ಅನಾಹುತ 
ರಾಜ್ಯ

ರೈಲ್ವೆ ಗೇಟ್ ದಾಟುವಾಗಲೇ ಧಿಡೀರನೇ ಆಗಮಿಸಿದ ಎಂಜಿನ್! ಕೂದಲೆಳೆಯಲ್ಲಿ ತಪ್ಪಿತು ಅನಾಹುತ

ಬಸ್ ಚಾಲಕನ ಸಮಯಪ್ರಜ್ಞೆಯ ಕಾರಣ ರೈಲಿನಡಿ ಸಿಕ್ಕು ಸಾವನ್ನಪ್ಪಬೇಕಾಗಿದ್ದ 40 ಪ್ರಯಾಣಿಕರ ಜೀವ ಉಳಿದಿರುವ ಘಟನೆ ಧಾರವಾಡ ಹೊರವಲಯದ ಶ್ರೀನಗರ ರೈಲ್ವೆ ಗೇಟ್ ಸಮೀಪ ನಡೆದಿದೆ.

ಧಾರವಾಡ: ಬಸ್ ಚಾಲಕನ ಸಮಯಪ್ರಜ್ಞೆಯ ಕಾರಣ ರೈಲಿನಡಿ ಸಿಕ್ಕು ಸಾವನ್ನಪ್ಪಬೇಕಾಗಿದ್ದ 40 ಪ್ರಯಾಣಿಕರ ಜೀವ ಉಳಿದಿರುವ ಘಟನೆ ಧಾರವಾಡ ಹೊರವಲಯದ ಶ್ರೀನಗರ ರೈಲ್ವೆ ಗೇಟ್ ಸಮೀಪ ನಡೆದಿದೆ.
ಗುರುವಾರ ಬೆಳಿಗ್ಗೆ ಶ್ರೀನಗರ  ಸರ್ಕಲ್ ನಲ್ಲಿನ ಮಾನವರಹಿತ ರೈಲ್ವೆ ಕ್ರಾಸಿಂಗ್ ಸಮೀಪ ಧಾರವಾಡದಿಂದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೊರಟಿದ್ದ ಬಸ್ ಸಂಚರಿಸುತ್ತಿತ್ತು. ಆಗ ಏಕಾಏಕಿ ರೈಲ್ವೆ ಎಂಜಿನ್ ಒಂದು ಆಗಮಿಸಿದೆ. ಇದನ್ನು ನೋಡಿದ ಚಾಲಕ ತಕ್ಷಣ ಬಸ್ ನ ವೇಗ ಹೆಚ್ಚಿಸಿ ಬಿರುಸಾಗಿ ಓಡಿಸಿದ್ದಾನೆ. ಇದರಿಂದ ಬಸ್ ರೈಲಿನ ಎಂಜಿನ್ ಗೆ ಡಿಕ್ಕಿಯಾಗುವುದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ನೈಋತ್ಯರೈಲ್ವೆ (SWR) ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಪ್ರಯಾಣಿಕರನ್ನು ಉಳಿಸುವಲ್ಲಿ ಚಾಲಕನ ಧೈರ್ಯವನ್ನು ಸ್ಥಳೀಯರು ಪ್ರಶಂಸಿಸಿದ್ದಾರೆ.
ರೈಲ್ವೆ ಸಿಬ್ಬಂದಿಗಳ ನಿರ್ಲಕ್ಷ್ಯದ ಬಗ್ಗೆ ತೀವ್ರ  ಅಸಮಾಧಾನ ವ್ಯಕ್ತಪಡಿಸಿದ ಪ್ರಯಾಣಿಕರು.ರೈಲ್ವೆ ಗೇಟಿನ ಗೇಟ್‍ಮ್ಯಾನ್ ಅಜಾರೂಕ ರೈಲಿನ ಲೋಕೊಪೈಲಟ್‍ನ ಅಜಾರೂಕತೆಗೆ ಕಿಡಿಕಾರಿದ್ದಾರೆ.
ಆದಾಗ್ಯೂ, ರೈಲ್ವೆ ಕ್ರಾಸಿಂಗ್ನಲ್ಲಿ ಸಿಬ್ಬಂದಿ ರೈಲಿನ ಆಗಮನದ ಕುರಿತು ಯಾವುದೇ ಸಂಕೇತವನ್ನು ಸ್ವೀಕರಿಸಲಿಲ್ಲ ಎಂದು ಹೇಳಿದರು. ಬಸ್ ಬರುವುದನ್ನು ಕಂಡಾಗ ಅವರು ಬಸ್ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಅದೃಷ್ಟವಶಾತ್, ರೈಲು ಬರುವುದರೊಳಹ್ಗೆ ಬಸ್ ಹಳಿಯಿಂದ ದೂರ ಸಾಗಿತ್ತು. ಇದು ನನ್ನ ವೃತಿ ಜೀವನದಲ್ಲಿ ನಡೆದ ಈ ಬಗೆಯ ಮೊದಲ ಅನುಭವ ಎಂದು ಅವರು ವಿವರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT