ರಾಜ್ಯ

ಕಾರವಾರ: ಜಾತ್ರೆ ಮುಗಿಸಿ ಬರುವಾಗ ದೋಣಿ ಮುಳುಗಡೆ, 9 ಮಂದಿ ನೀರುಪಾಲು, ಹಲವರು ನಾಪತ್ತೆ

Raghavendra Adiga
ಕಾರವಾರ: ಜಾತ್ರೆ ಮುಗಿಸಿಕೊಂಡು ಹಿಂತಿರುಗಿತ್ತಿದ್ದಾಗ ಸಮುದ್ರದಲ್ಲಿ ದೋಣಿ ಮುಳುಗಡೆಯಾಗಿ 9 ಮಂದಿ ಸಾವನ್ನಪ್ಪಿ ಹಲವರು ನಾಪತ್ತೆಯಾಗಿರುವ ಘಟನೆ ಕಾರವಾರ ಸಮೀಪ ಕೂರ್ಮಗಡದಲ್ಲಿ ನಡೆದಿದೆ.
ಅರಬ್ಬಿ ಸಮುದ್ರದ ನಡುವಿನ ಕೂರ್ಮಗಡದಲ್ಲಿರುವ ನರಸಿಂಹ ದೇವರ ಜಾತ್ರೆ ಮುಗಿಸಿ ವಾಪಾಸಾಗುವ ವೇಳೆ ಈ ಅವಘಡ ಸಂಭವಿಸಿದ್ದು ದೋಣಿಯಲ್ಲಿ ಸುಮಾರು 22 ಜನರಿದ್ದರು ಎನ್ನಲಾಗಿದೆ.
ನಾಪತ್ತೆಯಾಗಿರುವವರು ಎಲ್ಲರೂ ಕೊಪ್ಪಳ ಮೂಲದವರೆನ್ನಲಾಗಿದ್ದು ಕರಾವಳಿ ಕಾವಲು ಪಡೆ, ಸ್ಥಳೀಯ ಮೀನುಗಾರರು ಸೇರಿ ಹಲವರು ಶೋಧಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ನಕುಲ್, ಹಿರಿಯ ಪೋಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
SCROLL FOR NEXT