ರಾಜ್ಯ

ಬೆಂಗಳೂರು: ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಪ್ರಶಸ್ತಿ ಗೆದ್ದ ಎನ್‍ಸಿಸಿ ತಂಡಕ್ಕೆ ಭವ್ಯ ಸ್ವಾಗತ

Lingaraj Badiger
ಬೆಂಗಳೂರು: ದೆಹಲಿಯಲ್ಲಿ ನಡೆದ 70ನೇ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಪ್ರಧಾನಮಂತ್ರಿಯವರ ಬ್ಯಾನರ್ ಪ್ರಶಸ್ತಿ ಮುಡಿಗೇರಿಸಿಕೊಂಡ ಕರ್ನಾಟಕ-ಗೋವಾ ಎನ್‍ಸಿಸಿ ತಂಡಕ್ಕೆ ಗುರುವಾರ ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಭವ್ಯ ಸ್ವಾಗತ ನೀಡಲಾಯಿತು.
ಕರ್ನಾಟಕ-ಗೋವಾ ಎನ್‍ಸಿಸಿ ಉಪ ಮಹಾ ನಿರ್ದೇಶಕ ಡಿ.ಎಂ.ಪುರ್ವಿಮಠ್, ಎನ್‍ಸಿಸಿ ಹಿರಿಯ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ತಂಡವನ್ನು ಆತ್ಮೀಯವಾಗಿ ಬರಮಾಡಿಕೊಂಡರು.  
ಸೇನೆ, ನೌಕಾಪಡೆ ಮತ್ತು ವಾಯುಪಡೆ ಎನ್‍ಸಿಸಿ ವಿಭಾಗಗಳ 106 ಕೆಡೆಟ್‍ಗಳ ತಂಡ, ಕಳೆದ ಒಂದು ತಿಂಗಳು ದೆಹಲಿಯಲ್ಲಿ ಅನೇಕ ಕಠಿಣ ಸ್ಪರ್ಧೆಗಳನ್ನು ಎದುರಿಸಿದೆ. ವಾಯುಪಡೆ ವಿಭಾಗದಲ್ಲಿ ಉತ್ತಮ ಕೆಡೆಟ್‍ ಎನಿಸಿದ ವಿವೇಕ್‍ ಧಿಮನ್‍ ಬೆಳ್ಳಿ ಪದಕ ಗೆದ್ದಿದ್ದಾರೆ. ನೌಕಾ ವಿಭಾಗದ ಉತ್ತಮ ಕೆಡೆಟ್‍ ಎನಿಸಿರುವ ಐಶ್ವರ್ಯ ಅವರು ಕಂಚಿನ ಪದಕ ಜಯಿಸಿದ್ದಾರೆ.
SCROLL FOR NEXT