ಸಾಂದರ್ಭಿಕ ಚಿತ್ರ 
ರಾಜ್ಯ

ನೈಸ್ ರಸ್ತೆಯಲ್ಲಿ ಡ್ರಾಗ್ ರೇಸ್ ಹುಚ್ಚಾಟ: ಯುವಕ ದುರ್ಮರಣ

ಕಗ್ಗಲೀಪುರದ ನೈಸ್ ರಸ್ತೆ ಬಳಿ ಡ್ರಾಗ್ ರೇಸ್ ಹುಚ್ಚಾಟದಿಂದ 26 ವರ್ಷದ ಯುವಕನೋರ್ವ ಮೃತಪಟ್ಟು, ಆತನ ಇಬ್ಬರು ಗೆಳೆಯರು ಗಾಯಗೊಂಡಿರುವ ಘಟನೆ ನಡೆದಿದೆ.

ಬೆಂಗಳೂರು: ಕಗ್ಗಲೀಪುರದ ನೈಸ್ ರಸ್ತೆ ಬಳಿ ಡ್ರಾಗ್  ರೇಸ್ ಹುಚ್ಚಾಟದಿಂದ 26 ವರ್ಷದ ಯುವಕನೋರ್ವ ಮೃತಪಟ್ಟು,  ಆತನ ಇಬ್ಬರು ಗೆಳೆಯರು ಗಾಯಗೊಂಡಿರುವ ಘಟನೆ ನಡೆದಿದೆ.
ಪಾದರಾಯನಪುರದ ಸೈಯದ್ ರಿಜ್ವಾನ್ ಮೃತಪಟ್ಟ ಯುವಕ. ಈತ ಗ್ಯಾರೇಜ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಗಾಯಾಳು ಸಂದೀಪ್  ಮೆಕ್ಯಾನಿಕ್ ಆಗಿದ್ದ ಎನ್ನಲಾಗಿದೆ. ಮತ್ತೊಬ್ಬ ಗಾಯಾಳುವಿನ ಹೆಸರು ತಿಳಿದುಬಂದಿಲ್ಲ. 
ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಕಾಮಯ್ಯನಪಾಳ್ಯದಲ್ಲಿ ಸೇರಿದ 15 ಬೈಕ್ ಸವಾರರ ತಂಡ ನೈಸ್ ರಸ್ತೆಯಲ್ಲಿ ಡ್ರಾಗ್ ರೇಸ್ ನಲ್ಲಿ ತೊಡಗಿರುವಾಗ ಸಂದೀಪ್  ರಿಜ್ವಾನ್ ಬೈಕ್ ಗೆ ಗುದಿದ್ದಾನೆ. ಇದರಿಂದಾಗಿ ಇಬ್ಬರು ರಸ್ತೆ ಕೆಳಗೆ ಬಿದಿದ್ದಾರೆ. ರಿಜ್ವಾನ್  ಮತ್ತೊಬ್ಬ ಸ್ನೇಹಿತ ಕೂಡಾ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
ಸಂದೀಪ್ ತೀವ್ರವಾಗಿ ಗಾಯಗೊಂಡಿದ್ದು, ಆತನ ಪರಿಸ್ಥಿತಿ ಗಂಭೀರವಾಗಿದೆ. ಕೆಂಗೇರಿ ಪೊಲೀಸರ ಸೂಚನೆ ಮೇರೆಗೆ ಕಗ್ಗಲೀಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. 
ತಮ್ಮ ಮಗನ ಸಾವಿನ ಬಗ್ಗೆ ಯಾರೊಬ್ಬರ ಮೇಲೆ ಆರೋಪ ಮಾಡುವುದಿಲ್ಲ ಎಂದು ಸೈಯದ್ ರಿಜ್ವಾನ್  ತಂದೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಸಂದೀಪ್  ಹೇಳಿಕೆಯನ್ನೂ ಸಹ ಪೊಲೀಸರು ದಾಖಲಿಸಿಕೊಂಡಿದ್ದಾರೆ. ರೇಸ್ ಗಾಗಿ ಬಳಸಲಾಗಿದ್ದ ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೈಸ್ ರಸ್ತೆಯಲ್ಲಿ ಪ್ರತಿನಿತ್ಯ ಡ್ರಾಗ್ ರೇಸ್ ನಡೆಸಲಾಗುತ್ತದೆ. ವಿಶೇಷವಾಗಿ ವಾರಾಂತ್ಯದಲ್ಲಿ ಹೆಚ್ಚಾಗಿ ನಡೆಯುತ್ತದೆ. ಇಲ್ಲಿ ಸೇರುವ ಯುವಕರು ಬೆಟ್ಟಿಂಗ್ ಕಟ್ಟಿಕೊಂಡು ರೇಸ್ ನಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಪ್ರತ್ಯಕ್ಷದರ್ಶಿ ಕರಿಯಪ್ಪ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT