ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಹಗ್ ಮಾಡಲು ನಿರಾಕರಿಸಿದ ಸ್ನೇಹಿತನಿಗೆ ಚಾಕು ಇರಿತ!

ಹಗ್ ಮಾಡಲು ನಿರಾಕರಿಸಿದ ಗೆಳೆಯನಿಗೆ ಚಾಕು ಇರಿದ ಅಮಾನವೀಯ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ....

ಬೆಂಗಳೂರು: ಹಗ್ ಮಾಡಲು ನಿರಾಕರಿಸಿದ ಗೆಳೆಯನಿಗೆ ಚಾಕು ಇರಿದ ಅಮಾನವೀಯ ಘಟನೆಯೊಂದು  ಬೆಂಗಳೂರಿನಲ್ಲಿ  ನಡೆದಿದೆ.
ಭಾನುವಾರ ರಾತ್ರಿ ಘಟನೆ ನಡೆದಿದೆ.  ನಗರದ ಮಾವಳ್ಳಿ ಮಸೀದಿ ರಸ್ತೆಯಲ್ಲಿ ಶೋಯೆಬ್ ಮತ್ತು ನಬಿ ಕಿತ್ತಾಡಿಕೊಂಡಿದ್ದಾರೆ.
ಶೋಯೆಬ್ ಪಾಷಾ ಮತ್ತು ಸಾಹಿದ್ ಪಾಷಾ ಸಹೋದರರು ಬೈಕ್ ನಲ್ಲಿ ಹೋಗುತ್ತಿದ್ದರು. ಈ ವೇಳೆ ನಬಿ ಅವರನ್ನು ಕೈ ಬೀಸಿ ಕರೆದಿದ್ದಾನೆ.ಪರಸ್ಪರ ಶುಭಾಶಯ ಕೋರಿದ್ದಾರೆ. 
ಮಾತುಕತೆ ನಡೆಸಿದ ಬಳಿಕ ನಬಿ, ಶೋಯಬ್ ನನ್ನು ಹಗ್ ಮಾಡಲು ಮುಂದಾಗಿದ್ದಾನೆ. ಈ ವೇಳೆ ಶೋಯಬ್ ನಬಿಯನ್ನು ದೂರ ತಳ್ಳಿದ್ದಾನೆ. ಅಲ್ಲದೆ ನಿನ್ನ ಕೆಟ್ಟದಾಗಿ ಉಸಿರಾಡುತ್ತೀಯಾ ಎಂದು ತಿಳಿಸಿದ್ದಾನೆ. ಈ ವಿಚಾರ ಸಂಬಂಧ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಶೋಯೆಬ್ ಮಾತಿನಿಂದ ಕೆಂಡಾಮಂಡಲನಾದ ನಬಿ ಚಾಕು ತೆಗೆದುಕೊಂಡು ಬಂದು ಶೋಯಬ್ ಹೊಟ್ಟೆಗೆ ಇರಿದಿದ್ದಾನೆ. ನಂತರ ಅಲ್ಲಿಂದ ಓಡಿ ಹೋಗಿದ್ದಾನೆ, ಸಹೋದರನನ್ನು ರಕ್ಷಿಸಿಲು ಬಂದ ಶಾಹಿದ್ ಗೂ ಚಾಕು ಇರಿದಿದ್ದಾನೆ, ನಂತರ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಬಿಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ಘಟನೆಯಿಂದಾಗಿ ಗಾಯಗೊಂಡಿರುವ ಶೋಯಬ್ ಹಾಗೂ ಆತನ ಸಹೋದರ ಶಾಹೀದ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಅಪಾಯದಿಂದ ಪಾರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

SCROLL FOR NEXT