ರಾಜ್ಯ

ಮಂಗಳೂರು: ಮಾರಕಾಸ್ತ್ರದಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

Raghavendra Adiga
ಮಂಗಳೂರು:  ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ಬುಧವಾರ ರಾತ್ರಿ ನಡೆದಿದೆ.
ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಬಳಿಯ ನಿವಾಸಿ ನಾರಾಯಣ (46) ಕೊಲೆಯಾದವರು.
ಅವರು ಚೆಂಬುಗುಡ್ಡೆಯ ಮನೆಯಲ್ಲಿ ಪತ್ನಿ ಲಲಿತಾ ಮತ್ತು‌ ಅವರ ಪುತ್ರ ರಾಜೇಶ್ ಜೊತೆ ವಾಸವಾಗಿದ್ದರು. ಲಲಿತಾ ಅವರ ಅಣ್ಣನ ಮಗ ಕೂಡ ಅದೇ ಮನೆಯಲ್ಲಿ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಸಂಜೆ ಲಲಿತಾ ಮನೆಯಲ್ಲಿರದ ವೇಳೆ ಘಟನೆ ನಡೆದಿದ್ದು  ಅವರು ರಾತ್ರಿ ಮನೆಗೆ ಬಂದಾಗ ನಾರಾಯಣ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡಿದ್ದಾರೆ.
ಘಟನೆ ಸಂಬಂಧ ರಾಜೇಶ್ ಎಂಬುವವನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದ್ದಾಗ ಹತ್ಯೆಯಾಗಿದೆ ಎಂದು ಅನುಮಾನ ವ್ಯಕ್ತವಾಗಿದ್ದು ನಿಖರ ಕಾರಣ ತನಿಖೆ ಬಳಿಕವೇ ಬಹಿರಂಗವಾಗಬೇಕಿದೆ.
SCROLL FOR NEXT