ರಾಜ್ಯ

ವಿಟ್ಲ ಅಪ್ರಾಪ್ತೆಯ ಸಾಮೂಹಿಕ ಅತ್ಯಾಚಾರ ಪ್ರಕರಣ: ಗ್ರಾಮ ಪಂಚಾಯತ್ ಸಿಬ್ಬಂದಿ ಸೇರಿ ಮೂವರು ಅರೆಸ್ಟ್

Raghavendra Adiga
ವಿಟ್ಲ: ಕರಾವಳಿ ಭಾಗದ ಜನರಲ್ಲಿ ಭಾರೀ ಭೀತಿಗೆ ಕಾರಣವಾಗಿದ್ದ ವಿಟ್ಲ ನಿವಾಸಿ ಅಪ್ರಾಪ್ತ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಗ್ರಾಮ ಪಂಚಾಯತ್ ಸಿಬ್ಬಂದಿ ಸೇರಿ ಮೂವರನ್ನು ಪೋಲೀಸರು ಬಂಧಿಸಿದ್ದಾರೆ.
ಗ್ರಾಮ ಪಂಚಾಯತ್ ತೆರಿಗೆ ಸಂಗ್ರಾಹಕ ಕೃಷ್ಣ ನಾಯ್ಕ್, ಆಟೋ ಚಾಲಕ ಧನುಷ್ ನಾಯ್ಕ್, ಮತ್ತು ಗನೇಶ್ ಎಂಬುವವರನ್ನು ವಿಟ್ಲ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ವಿಟ್ಲ ನಿವಾಸಿಯಾಗಿದ್ದ ಹದಿನೇಳರ ಭಾಲಕಿ ಮೇಲೆ ಗ್ರಾಮ ಪಂಚಾಯತ್ ಸಿಬ್ಬಂದಿ ಕೃಷ್ಣ ನಾಯ್ಕ್, ಧನುಷ್ ನಾಯ್ಕ್, ಗಣೇಶ್, ಪವನ್ ಹಾಗೂ ಪುನೀತ್ ಸೇರಿ ನಿರಂತರ  ಅತ್ಯಾಚಾರ ನಡೆಸಿದ್ದರು.  ಬೇರೆ ಬೇರೆ ಸಮಯದಲ್ಲಿ ಈ ಐವರೂ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದು ಆಕೆ ಈಗ ಆರು ತಿಂಗಳ ಗರ್ಭಿಣಿ ಎಂದು ತಿಳಿದಾಗಲೇ ಘಟನೆ ಬೆಳಕಿಗೆ ಬಂದಿದೆ.
ಬಾಲಕಿ ಮನೆಗೆ ಆಶಾ ಕಾರ್ಯಕರ್ತೆ ಭೇಟಿ ಕೊಟ್ತಾಗ ಪ್ರಕರಣ ಬೆಳಕು ಕಂಡಿತ್ತು. ಈ ಬಗ್ಗೆ ಬಾಲಕಿ ತಡವಾಗಿ ದೂರು ಸಲ್ಲಿಸಿದ್ದು ಪೋಲೀಸರು ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದರು.
SCROLL FOR NEXT