ಜು.14ಕ್ಕೆ ವಿತ್ತ ಜಗತ್ತು: ತಿಳಿಯಬೇಕಾದ ವಿಷಯ ಹಲವು ಹತ್ತು, ಟೆಕ್ ಲೋಕದ ಹತ್ತು ಹೊಸ ಮುಖಗಳು ಪುಸ್ತಕ ಬಿಡುಗಡೆ
ಬೆಂಗಳೂರು: ಕನ್ನಡಪ್ರಭ.ಕಾಂ ನ ಜನಪ್ರಿಯ
ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರ ವಿತ್ತ ಜಗತ್ತು; ತಿಳಿಯಬೇಕಾದ ವಿಷಯ ಹಲವು ಹತ್ತು ಪುಸ್ತಕ ಜು.14 ರಂದು ಬೆಳಿಗ್ಗೆ 10 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಇದೇ ವೇಳೆ ವಿಜಯವಾಣಿ ಪತ್ರಿಕೆಯ ಟೆಕ್ ಲೋಕದ ಜನಪ್ರಿಯ ಅಂಕಣಕಾರ ಟಿ.ಜಿ ಶ್ರೀನಿಧಿ ಅವರ ಟೆಕ್ ಲೋಕದ ಹತ್ತು ಹೊಸ ಮುಖಗಳು ಪುಸ್ತಕವೂ ಬಿಡುಗಡೆಯಾಗಲಿದೆ.
ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರಾದ ತೇಜಸ್ವಿನಿ ಅನಂತ್ ಕುಮಾರ್, ಖ್ಯಾತ ಲೇಖಕ ವಸುಧೇಂದ್ರ ಪುಸ್ತಕ ಲೋಕಾರ್ಪಣೆಗೊಳಿಸಲಿದ್ದಾರೆ.
ಹಣಕ್ಲಾಸು ಭಾಗ-1, ಭಾಗ-2, ಸ್ಪ್ಯಾನಿಷ್ ಗಾದೆಗಳು ರಂಗಸ್ವಾಮಿ ಅವರ ಇತರ ಜನಪ್ರಿಯ ಪುಸ್ತಕಗಳಾಗಿವೆ. ಹಣಕ್ಲಾಸು ಪ್ರತಿ ಗುರುವಾರ ಕನ್ನಡಪ್ರಭ.ಕಾಮ್ ನಲ್ಲಿ ಪ್ರಕಟವಾಗುವ ಅಂಕಣ ಬರಹವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos