ರಾಜ್ಯ

ಭದ್ರಾವತಿ: ಸಾಮಾಜಿಕ ತಾಣಗಳಲ್ಲಿ ಟ್ರೆಂಡ್ ಆದ #SaveVISL ಅಭಿಯಾನ

Raghavendra Adiga
ಶಿವಮೊಗ್ಗ: ಶತಮಾನ ಕಂಡ ಕರ್ನಾಟಕದ ಹೆಮ್ಮೆಯ ಭದ್ರಾವತಿ ಶ್ವೇಶ್ವರಯ್ಯ ಐರನ್ ಮತ್ತು ಸ್ಟೀಲ್ ಲಿಮಿಟೆಡ್ ಅನ್ನು ಖಾಸಗೀಕರಣಗೊಳಿಸುವ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ನಿರ್ಧಾರ ಅಲ್ಲಿನ ಉದ್ಯೋಗಿಗಳಿಗಷ್ಟೇ ಅಲ್ಲದೆ ಸಾರ್ವಜನಿಕರನ್ನೂ ಕೆರಳಿಸಿದೆ.
ಈ ಸಂಬಂದ್ಘ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ಜನರು ಈ ಕ್ರಮವನ್ನು ವಿರೋಧಿಸಿ ಆನ್‌ಲೈನ್ ಪ್ರತಿಭಟನೆಯನ್ನು ಪ್ರಾರಂಭಿಸಿದ್ದಾರೆ. ಬೆಂಗಳೂರಿಗೆ ಶರಾವತಿ ನೀರನ್ನು ಸರಬರಾಜು ಮಾಡುವುದನ್ನು ವಿರೋಧಿಸಿ #SaveSharavathi  ಅಭಿಯಾನ ವೈರಲ್ ಆದ ಬಳಿಕ #SaveVISL ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಟ್ವಿಟರ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಈಗ #SaveVISL ಟ್ರೆಂಡಿಂಗ್ ಆಗಿದೆ.
ವಿಐಎಸ್ಎಲ್ ಕಾರ್ಬನ್, ಫ್ರೀ-ಕಟಿಂಗ್ ಸ್ಟೀಲ್ ಮತ್ತು ಗಟ್ಟಿಯಾದ, ದೀರ್ಘಬಾಳಿಕೆಯ ಉಕ್ಕು ಸೇರಿದಂತೆ ಉತ್ತಮ ಗುಣಮಟ್ಟದ ಮಿಶ್ರಲೋಹ ಮತ್ತು ವಿಶೇಷ ಉಕ್ಕಿನ ಉತ್ಪಾದನೆಯಲ್ಲಿ ಪ್ರವರ್ತಕ ಎನಿಸಿದೆ.ಮಹಾರಾತ್ನ ಸಾರ್ವಜನಿಕ ವಲಯದ ಉಕ್ಕಿನ ಸಚಿವಾಲಯದ ಆಡಳಿತ ನಿಯಂತ್ರಣದಲ್ಲಿ, ಐದು ಸಮಗ್ರ ಉಕ್ಕಿನ ಸ್ಥಾವರಗಳು, ಫೆರೋ-ಮಿಶ್ರಲೋಹ ಸ್ಥಾವರ ಮತ್ತು ಮೂರು ವಿಶೇಷ ಉಕ್ಕಿನ ಸ್ಥಾವರಗಳನ್ನು ಹೊಂದಿದೆ. ಎಸ್‌ಐಎಲ್ ಹೊಂದಿರುವ ಅನೇಕ ಕಾರ್ಖಾನೆಗಳಲ್ಲಿ ವಿಐಎಸ್ಎಲ್ ಒಂದಾಗಿದೆ. ಆದರೆ ಈಗ ವಿಐಎಸ್ಎಲ್ ಖಾಸಗೀಕರಣ ಎಂಬ ದೊಡ್ಡ ಅಡಕತ್ತರಿಯಲ್ಲಿ ಸಿಕ್ಕಿದೆ.ಏಕೆಂದರೆ ಎಸ್‌ಐಎಲ್ ‘ವಿಐಎಸ್‌ಎಲ್‌ನ ಲ್ಲಿ ಹೆಚ್ಚುವರಿ ಹೂಡಿಕೆಗಾಗಿ ಖಾಸಗಿಯವರಿಂದ ಟೆಂಡರ್ ಆಹ್ವಾನಿಸಿದೆ. 
SCROLL FOR NEXT