ಬೆಳಗಾವಿ: ಚಲಿಸುವ ರೈಲಿನಿಂದ ನವಜಾತ ಹೆಣ್ಣುಮಗುವನ್ನು ಎಸೆದ ಕಟುಕರು, ರೈತಾಪಿ ಜನರಿಂದ ರಕ್ಷಣೆ 
ರಾಜ್ಯ

ಬೆಳಗಾವಿ: ಚಲಿಸುವ ರೈಲಿನಿಂದ ನವಜಾತ ಹೆಣ್ಣುಮಗುವನ್ನು ಎಸೆದ ಕಟುಕರು, ರೈತಾಪಿ ಜನರಿಂದ ರಕ್ಷಣೆ

ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ದೇಶಾದ್ಯಂತ ಕೂಗು ಏಳುತ್ತಿರುವ ಬೆನ್ನಲ್ಲೇ ಬೆಳಗಾವಿಯ್ತ ಖಾನಾಪುರ ಲೋಂಡಾ ಸಮೀಪ ನವಜಾತ ಹೆಣ್ಣು ಮಗುವೊಂದನ್ನು ಚಲಿಸುತ್ತಿದ್ದ ರೈಲಿನಿಂದ.....

ಬೆಳಗಾವಿ: ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ದೇಶಾದ್ಯಂತ ಕೂಗು ಏಳುತ್ತಿರುವ ಬೆನ್ನಲ್ಲೇ ಬೆಳಗಾವಿಯ್ತ ಖಾನಾಪುರ ಲೋಂಡಾ ಸಮೀಪ ನವಜಾತ ಹೆಣ್ಣು ಮಗುವೊಂದನ್ನು ಚಲಿಸುತ್ತಿದ್ದ ರೈಲಿನಿಂದ ಎಸೆದಿರುವ ಘಟನೆ ವರದಿಯಾಗಿದೆ. ಅದೃಷ್ಟವಶಾತ್ ಹಳಿ ಪಕ್ಕ ನಡೆದುಹೋಗುತ್ತಿದ್ದ ಕೆಲವು ರೈತಾಪಿ ವರ್ಗದ ಜನರಿಗೆ ಮಗುವಿನ ಅಳುವಿನ ದನಿ ಕೇಳಿದ್ದು ಗಾಯಗೊಂಡ ಮಗುವನ್ನು ರಕ್ಷಿಸಿದ್ದಾರೆ.
ಲೋಂಡಾ-  ಅಕ್ರಾಲಿ ನಡುವಿನ ದಟ್ಟ ಕಾಡುಗಳ ನಡುವೆ ರೈಲು ಚಲಿಸುತ್ತಿದ್ದ ಸಮಯ ಮಗುವನ್ನು ರೈಲಿನಿಂಡ ಎಸೆಯಲಾಗಿದೆ ಎಂದು ಪೋಲೀಸರು ಶಂಕಿಸಿದ್ದಾರೆ. 
ಇದು ದಟ್ಟ ಕಾನನವಾಗಿದ್ದು ಭಾರೀ ಮಳೆಬೀಳುವ ಪ್ರದೇಶವಾಗಿದೆ. ರೈತರು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಮಗು ಅಳುತ್ತಿರುವುದನ್ನುಪತ್ತೆ ಮಾಡಿದ್ದಾರೆ.  ಅವರಲ್ಲಿ ಒಬ್ಬರು ತಕ್ಷಣ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾಬುರಾವ್ ದೇಸಾಯಿ ಅವರಿಗೆ ಮಾಹಿತಿ ನೀಡಿದರು, ನಂತರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಕಛೇರಿಗೆ ಮಾಹಿತಿ ಕೊಡಲಾಗಿದೆ. ಅಲ್ಲದೆ ರೈಲ್ವೆ ಪೊಲೀಸರಿಗೆ ಸಹ ವಿಷಯ ತಿಳಿಸಲಾಗಿದೆ.
ಮಾಹಿತಿ ಪಡೆದ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿ ಹೆಣ್ಣು ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT