ಸಾಮೂಹಿಕ ವಿವಾಹದಲ್ಲಿ ಸಾಹಿತಿ ಕುಂ. ವೀ ಪುತ್ರನ ಅಂತರ್ಜಾತಿ ಮದುವೆ 
ರಾಜ್ಯ

ಸಾಮೂಹಿಕ ವಿವಾಹದಲ್ಲಿ ಸಾಹಿತಿ ಕುಂ.ವೀ. ಪುತ್ರನ ಅಂತರ್ಜಾತಿ ಮದುವೆ

ಸಾಹಿತಿ ಕುಂ.ವೀರಭದ್ರಪ್ಪ ಪುತ್ರ ಪ್ರವರ ಕುಂ.ವೀ. ಬುಧವಾರ ನಗರದ ಮುರುಘಾ ಮಠದಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಅಂಬಿಕಾ ಅವರೊಂದಿಗೆ ...

ಚಿತ್ರದುರ್ಗ: ಸಾಹಿತಿ ಕುಂ.ವೀರಭದ್ರಪ್ಪ ಪುತ್ರ ಪ್ರವರ ಕುಂ.ವೀ. ಬುಧವಾರ ನಗರದ ಮುರುಘಾ ಮಠದಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಅಂಬಿಕಾ ಅವರೊಂದಿಗೆ ಅಂತರ್ಜಾತಿ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. 
ಮುರುಘಾ ಮಠದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರ ಸಮ್ಮುಖದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕುಂಬಾರ ಸಮುದಾಯದ ಪ್ರವರ ಅವರು ಬೆಸ್ತ ಸಮುದಾಯಕ್ಕೆ ಸೇರಿದ ಅಂಬಿಕಾ ಅವರನ್ನು ವರಿಸಿದ್ದಾರೆ.
ಯಾರನ್ನೋ ಮೆಚ್ಚಿಸಲು ಇಂತಹ ವಿವಾಹ ಮಾಡಿಕೊಂಡಿಲ್ಲ, ಇಬ್ಬರು ಚರ್ಚಿಸಿ ಪರಸ್ಪರ ಒಪ್ಪಿ ಸರಳ ವಿವಾಹವಾಗಿದ್ದೇವೆ ಎಂದು ವಧು ಅಂಬಿಕಾ ತಿಳಿಸಿದ್ದಾರೆ. 
ಇದೇ ವೇಳೆ ಒಟ್ಟು 45 ಜೋಡಿಗಳು ವಿವಾಹವಾಗಿದ್ದು, 6 ಅಂತರ್ಜಾತಿ ವಿವಾಹಗಳು ನೆರವೇರಿದವು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT