ಕುಮಟ: ಈ ಹಳ್ಳಿ ರಸ್ತೆ ಕಂಡು ಮದ್ವೆ ಸಹವಾಸವೇ ಬೇಡ ಅಂದ್ರು! 
ರಾಜ್ಯ

ಕುಮಟ: ಈ ಹಳ್ಳಿ ರಸ್ತೆ ಕಂಡು ಈ ಊರಿನ ಜೊತೆ ಸಂಬಂಧವೇ ಬೇಡ, ಮದ್ವೆ ಸಹವಾಸವೇ ಬೇಡ ಅಂದ್ರು!

ಉತ್ತರ ಕನ್ನಡ ಜಿಲ್ಲೆ ಮಲೆನಾಡು ಬಾಗದ ಹಳ್ಳಿಯ ಯುವಕ, ಯುವತಿಯರಿಗೆ ವಿವಿಧ ಕಾರಣಗಳಿಂಡ ವಿವ್ಹ ಸಂಬಧಗಳು ಬರುವುದು ವಿಳಂಬವಾಗುತ್ತಿದೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಮಲೆನಾಡು ಬಾಗದ ಹಳ್ಳಿಯ ಯುವಕ, ಯುವತಿಯರಿಗೆ ವಿವಿಧ ಕಾರಣಗಳಿಂಡ ವಿವ್ಹ ಸಂಬಧಗಳು ಬರುವುದು ವಿಳಂಬವಾಗುತ್ತಿದೆ. ಆದರೆ ಮೇಧಿನಿ ಎಂಬ ಗ್ರಾಮವು ಇನ್ನಷ್ಟು ವಿಶೇಷವಾಗಿದೆ. ಬಾಸ್ಮತಿ ಅಕ್ಕಿಯಂತೆ ಪ್ರಸಿದ್ದವಾಗಿರುವ ಮೇಧಿನಿ ಅಕ್ಕಿ ಬೆಳೆಯುವುದಕ್ಕೆ ಪ್ರಸಿದ್ದವಾಗಿರುವ ಈ ಗ್ರಾಮದ ಕನೆಯಯರಿಗೆ ಸೂಕ್ತ ವಿವಾಹ ಸಂಬಂಧಗಳು ಬರುತ್ತಿಲ್ಲ. ಇದಕ್ಕೆ ಕಾರಣ ಗ್ರಾಮಕ್ಕೆ ಸರಿಯಾದ ರಸ್ತೆ ಸಂಪರ್ಕವಿಲ್ಲದಿರುವುದೇ ಆಗಿದೆ. ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿರುವ ಕಾರಣ ಹೊರ ಊರುಗಳು, ಬೇರೆ ಗ್ರಾಮದವರು ಈ ಹಳ್ಳಿಯ ಯುವಕ-ಯುವತಿಯರ ಸಂಬಂಧ ಬೆಳೆಸಲು ಹಿಂದೇಟು ಹಾಕುತ್ತಾರೆ.
53 ಮನೆಗಳು ಮತ್ತು 400 ಜನಸಂಖ್ಯೆಯನ್ನು ಹೊಂದಿರುವ ಸಣ್ಣ ಗ್ರಾಮ ಮೇಧಿನಿ  ತಾಲೂಕು ಕೇಂದ್ರ ಕುಮಟಾದಿಂದ 38 ಕಿ.ಮೀ ದೂರದಲ್ಲಿದೆ ಮತ್ತು ಸಿದ್ದಾಪುರ ತಾಲ್ಲೂಕು ಗಡಿಯಲ್ಲಿ ಬರುತ್ತದೆ. ಒಮ್ಮೆ ಈ ಗ್ರಾಮಕ್ಕೆ ಹೋಗಬೇಕಾದಲ್ಲಿ ಕಾಡಿನ ಮೂಲಕ ವ ಮಣ್ಣಿನ ರಸ್ತೆಯ ಮೂಲಕ 8 ಕಿ.ಮೀ ನಡೆಯಬೇಕು. ಮಳೆಗಾಲದಲ್ಲಿ ಇದು ಇನ್ನಷ್ಟು ಅಪಾಯಕಾರಿಯಾಗಿರುತ್ತದೆ. ಅರ್ಧದಷ್ಟು ರಸ್ತೆ ಮಾರ್ಗ ಪಶ್ಚಿಮ ಘಟ್ಟಗಳ ನಡುವೆ ಹಾದುಹೋಗುತ್ತದೆ. ಇದು ವಾಹನ ತೆಗೆದುಕೊಂಡು ಹೋಗಲು ಸಹ ಅಪಾಯಕಾರಿ ಮಾರ್ಗವಾಗಿದೆ. ಈ ಗ್ರಾಮದಲ್ಲಿ ಬೆಳೆಯುವ ವಿಭಿನ್ನ ಅಕ್ಕಿಯು ಪಾಯಸದಂತಹಾ ಸಿಹಿ ಪದಾರ್ಥ ಮಾಡಲು ಬಲು ಬೇಡಿಕೆಯನ್ನು ಪಡೆದುಕೊಂಡಿದೆ.ಈ ಅಕ್ಕಿಗೆ ಕೆಜಿಯೊಂದಕ್ಕೆ 100ರಿಂದ 120 ರು. ದರವಿದ್ದರೂ ಸಾರಿಗೆ ವ್ಯವಸ್ಥೆ, ಸಂಪರ್ಕದ ಕೊರತೆಯಿಂದ ಬೆಳೆಯುವವರ ಸಂಖ್ಯೆ, ಖರೀದಿಸುವವರ ಸಂಖ್ಯೆ ಇಳಿಮುಖವಾಗಿದೆ.
\
8 ಕಿಮೀ ಉದ್ದದ ಅಪಾಯಕಾರಿ ಮಾರ್ಗದ ಕಾರಣದಿಂದಾಗಿ ಬೇರೆ ಗ್ರಾಮದ ಜನರು ಈ ಗ್ರಾಮದ ಕನ್ಯೆ ಹಾಗೂ ಯುವಕರನ್ನು ವಿವಾಹವಾಗಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಬೇಸಿಗೆಯಲ್ಲಿ ವಿದ್ಯುತ್ ಸರಬರಾಜು ಹೊರತುಪಡಿಸಿ ಬೇರೆ ಸೌಲಭ್ಯ ಈ ಗ್ರಾಮದಲ್ಲಿಲ್ಲ ಎಂದು ಗ್ರಾಮದ ನಿವಾಸಿ ಶಿವರಾಮೇಗೌಡ ಹೇಳಿದ್ದಾರೆ. . "ಮಳೆಗಾಲದಲ್ಲಿ, ವಿದ್ಯುತ್ ಸರಬರಾಜು ಸಂಪೂರ್ಣ ಸ್ಥಗಿತವಾಗುತ್ತದೆ. ಗ್ರಾಮಸ್ಥರು ತಮ್ಮ ಮಕ್ಕಳನ್ನು ಬೇರೆ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮನೆಗಳಲ್ಲಿ ಬಿಟ್ಟು ಅವರಿಗೆ ಹಿರಿಯ ಪ್ರಾಥಮಿಕ ಘಾಗೂ ಪ್ರೌಢಶಾಲಾ ವಿದ್ಯಾಭ್ಯಾಸ ನೀಡಬೇಕಾಗುತ್ತದೆ"
ಗ್ರಾಮಸ್ಥರು ಕೃಷಿ ಹಾಗೂ ಅರಣ್ಯದ ಉಪೌತ್ಪನ್ನಗಳಿಗೆ ಅವಲಂಬಿತರಾಗಿದ್ದಾರೆ. ಪ್ರತೀ ಚುನಾವಣೆಗೆ ಮುನ್ನ ಜನಪ್ರತಿನಿಧಿಗಳು ಈ ಗ್ರಾಮಕ್ಕೆ ರಸ್ತೆ ನಿರ್ಮಿಸುವ ಭರವಸೆ ನೀಡುತ್ತಾರೆ. ಆದರೆ ಒಮೆ ಚುನಾವಣೆ ಮುಗಿದ ನಂತರ ಮರೆತುಬಿಡುತ್ತಾರೆ. ಮಳೆಗಾಲದಲ್ಲಿ ಯುವಕರು ಮಾತ್ರವೇ ಪಟ್ಟಣಗಳಿಗೆ ತೆರಳಬಹುದು. ಇತರರು ಈ ಕಾಡಿನ ದಾರಿಯಲ್ಲಿ ಸಾಗುವುದು ಅಪಾಯಕಾರಿಯಾಗಿದೆ ಎಂದು ಗ್ರಾಮಕ್ಕೆ ಆಗಾಗ ಭೇಟಿ ನೀಡುವ ಹೋಮಿಯೋಪತಿ ವೈದ್ಯರಾಮ ಮುಂಡಾಲಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ನೋಂದಣಿ ಇಲ್ಲದೆ 'stock tips': ‘Finfluencers’ಗಳ ಸುಮಾರು 1 ಲಕ್ಷ ವಿಡಿಯೋ ಡಿಲೀಟ್​ ಮಾಡಿದ SEBI

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ರಿಷಭ್ ಪಂತ್ ಔಟ್; ಭಾರತ ತಂಡ ಸೇರಿದ 24 ವರ್ಷದ ಆಟಗಾರ!

SCROLL FOR NEXT