ರಾಜ್ಯ

ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಡಾ.ಬಿ.ಎಲ್.ಶಂಕರ್ ಅವಿರೋಧ ಆಯ್ಕೆ

Srinivas Rao BV
ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನ 2019-21ರ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಡಾ.ಬಿ.ಎಲ್. ಶಂಕರ್ 4ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಪಿ.ಮುನಿರಾಜು ತಿಳಿಸಿದ್ದಾರೆ.
2019ರಿಂದ 2021ರ ಅವಧಿಗೆ ಬೆಂಗಳೂರು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರ ಆಯ್ಕೆಗಾಗಿ ಜೂ.16ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಚಿಸಿ ನಾಮಪತ್ರ ಸಲ್ಲಿಸಿದ್ದರು. ಕೆಲವರು ಜೂ.10ರಂದು ನಾಮಪತ್ರ ಹಿಂಪಡೆದ ಕಾರಣ ಅಧ್ಯಕ್ಷ ಸ್ಥಾನಕ್ಕೆ ಡಾ.ಬಿ.ಎಲ್. ಶಂಕರ್ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದ್ದಾರೆ.
ಈ ಹಿಂದೆ ಕರ್ನಾಟಕ ಚಿತ್ರಕಲಾ ಪರಿಷತ್ತಿಗೆ ವಿಧಾನಸಭಾ ಅಧ್ಯಕ್ಷ ವೈಕುಂಠ ಬಾಳಿಗ, ಕೆ.ಎಸ್ ನಾಗರತ್ನಮ್ಮ, ರಾಮಕೃಷ್ಣ ಹೆಗಡೆ, ಡಾ, ಜೀವರಾಜ್ ಆಳ್ವ ಹಾಗೂ ಎಸ್.ಎಂ ಕೃಷ್ಣ ಸೇವೆ ಸಲ್ಲಿಸಿದ್ದಾರೆ.
SCROLL FOR NEXT