ರಾಜ್ಯ

ಬೆಂಗಳೂರು: ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರ ಕೊಲೆ

Raghavendra Adiga
ಬೆಂಗಳೂರು: ನಗರದಲ್ಲಿ ಶನಿವಾರ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಕೊಲೆಯಾಗಿದ್ದಾರೆ.  ಮೊದಲ ಪ್ರಕರಣದಲ್ಲಿ ಜಯನಗರ ಬಳಿಯ ಸಿದ್ದಾಪುರದಲ್ಲಿ 27 ವರ್ಷದ ಫುಟ್ ಪಾತ್ ವ್ಯಾಪಾರಿ ಅರುಣ್‌ನನ್ನು ರಸ್ತೆ ಮಧ್ಯದಲ್ಲಿ ಇರಿದು ಕೊಂದಿದ್ದರೆ ಎರಡನೇ ಘಟನೆಯಲ್ಲಿ, ಕೆಂಗೇರಿಯಲ್ಲಿ ಕುಡಿದು ಜಗಳವಾಡಿದ ಬಳಿಕ 38 ವರ್ಷದಪೇಂತರ್ ನನ್ನು ಅವನ ಸ್ನೇಹಿತರು ಇರಿದು ಕೊಂದಿದ್ದಾರೆ
ಅರುಣ್ ಕೊಲೆ ಆರೋಪಿ ಸಮೀರ್ ಇನ್ನೂ ತಲೆತಪ್ಪಿಸಿಕೊಂಡಿದ್ದಾನೆ. ತನ್ನ ತಂದೆಯೊಂದಿಗೆ ದಯಾನಂದ ನಗರದಲ್ಲಿ ವಾಸಿಸುತ್ತಿದ್ದ ಅರುಣ್ ಅಡಿಗೆ ಉಪಕರಣಗಳನ್ನು ರಿಪೇರಿ ಮಾಡುವ ಉದ್ಯೋಗಿಯಾಗಿದ್ದ. ಇತ್ತ ಸಿದ್ದಾಪುರದಲ್ಲಿ ಅಂಗಡಿಯೊಂದನ್ನು ಹೊಂದಿರುವ ಸಮೀರ್ ಅರುಣ್ ಕೆಲಸದಿಂದಾಗಿ ತನ್ನ ವ್ಯಾಪಾರ ಹಾಳಾಗುತ್ತಿದೆ ಎಂದು ಕ್ಯಾತೆ ತೆಗೆದಿದ್ದಾನೆ. 
ಗುರುವಾರ, ಸಮೀರ್‌ ಜತೆ ಅರುಣ್ ತಂದೆ ಜಗಳವಾಗಿದೆ. ಶುಕ್ರವಾರ ಅರುಣ್ ಸಮೀರನ ಅಂಗಡಿಗೆ ಹೋಗಿ ಅವನೊಂದಿಗೆ ಜಗಳವಾಡಿದ್ದಾನೆ. ಆ ಸಮಯದಲ್ಲಿ  ಕೋಪದಿಂದ, ಸಮೀರ್ ಮತ್ತು ಅವನ ಸ್ನೇಹಿತರು ಅವನ ಮೇಲೆ ಹಲ್ಲೆ ನಡೆಸಿ ಇರಿದಿದ್ದಾರೆ.ಘಟನೆಯನ್ನು ಗಮನಿಸಿದ ದಾರಿಹೋಕರು ಸಿದ್ದಾಪುರ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.
ಸದ್ಯ ಅರುಣ್ ಶವವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದ್ದು ಹಲ್ಲೆಕೋರರನ್ನು ಬಂಧಿಸುವ ಪ್ರಯತ್ನಗಳು ಸಾಗಿದೆ.
ಸ್ನೇಹಿತರಿಂದ ಪೇಂಟರ್ ಕೊಲೆ
ಉಳ್ಳಾಲ ಉಪನಗರನಿವಾಸಿಯಾದ ರಾಜಶೇಖರ್ನನ್ನು ಆತನ ಸ್ನೇಹಿತರೇ ಕುಡಿದ ಮತ್ತಿನಲ್ಲಿ ಇರಿದು ಕೊಂದಿದ್ದಾರೆ. ರಾಜ್‌ಶೇಕರ್ ಮತ್ತು ಅವರ ಸ್ನೇಹಿತರು ಮದ್ಯ ಸೇವಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ.
ಮದ್ಯದ ಅಮಲಿನಲ್ಲಿದ್ದ ಸ್ನೇಹಿತರ ನಡುವೆ ಜಗಳ ಪ್ರಾರಂಭವಾಗಿದೆ.ಆಗ ಸ್ನೇಹಿತನೊಬ್ಬ ರಾಜಶೇಖರ್ ನ ಗಂಟಲು ಸೀಳಿ ಪರಾರಿಯಾಗಿದ್ದಾನೆ. ಮೃತದೇಹವನ್ನು  ನೆರೆಹೊರೆಯವರು ಶನಿವಾರ ಮುಂಜಾನೆ ಪತ್ತೆಹಚ್ಚಿದ್ದು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.
ಕೊಲೆಯ ನಿಖರ ಕಾರಣ ಇನ್ನೂ ಪತ್ತೆಯಾಗಬೇಕಾಗಿದ್ದು ಪೋಲೀಸರು ಆರೋಪಿಗಳ ಶೋಧದಲ್ಲಿದ್ದಾರೆ.
SCROLL FOR NEXT