ರಾಜ್ಯ

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ‌ ವ್ಯಕ್ತಿ ನೇಣಿಗೆ ಶರಣು

Lingaraj Badiger
ಬೆಂಗಳೂರು: ಮಾರಣಾಂತಿಕ ಕಾಯಿಲೆಗೆ ತುತ್ತಾಗಿರುವ ವಿಷಯ ತಿಳಿದು ಆಘಾತಗೊಂಡ ವ್ಯಕ್ತಿಯೋರ್ವ ಮನನೊಂದು ನೇಣಿಗೆ ಶರಣಾಗಿರುವ ಘಟನೆ ನಗರದ ವಿಕ್ಟೋರಿಯಾ ಆಸ್ಪತ್ರೆಯ ಟಿ ಬ್ಲಾಕ್ ನಲ್ಲಿ‌ ಗುರುವಾರ ನಡೆದಿದೆ.
ರಾಘವೇಂದ್ರ(40) ನೇಣಿಗೆ ಶರಣಾದ ವ್ಯಕ್ತಿ. ಮೂಲತಃ ಬನ್ನೇರುಘಟ್ಟ ನಿವಾಸಿಯಾಗಿರುವ ರಾಘವೇಂದ್ರ ಅನಾರೋಗ್ಯಕ್ಕೀಡಾಗಿದ್ದರಿಂದ ಒಂದು‌ ವಾರದ ಹಿಂದೆ ರಕ್ತ ಪರೀಕ್ಷೆಗಾಗಿ ರಕ್ತ ಮಾದರಿ ಕೊಟ್ಟು ಹೋಗಿದ್ದರು. ಗುರುವಾರ ರಕ್ತದ ವರದಿ ಪಡೆಯಲು ಬಂದಿದ್ದ ಆತನಿಗೆ ಮಾರಣಾಂತಿಕ ಕಾಯಿಲೆ ಇದೆ ಎಂದು ತಿಳಿದು ಬಂದಿದೆ. ಇದರಿಂದ ಮನನೊಂದ ಆತ ಆಸ್ಪತ್ರೆಯ ಶೌಚಾಲಯದಲ್ಲಿಯೇ ನೇಣಿಗೆ ಶರಣಾಗಿದ್ದಾನೆ.
ಈ ಕುರಿತು ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‌ಪ್ರಕರಣ ದಾಖಲಾಗಿದೆ.
SCROLL FOR NEXT