ಸಾಂದರ್ಭಿಕ ಚಿತ್ರ 
ರಾಜ್ಯ

ಬೆಳಗಾವಿ: ಕೌಟುಂಬಿಕ ಕಲಹ ಪತ್ನಿಗಾಗಿ ತಾಯಿಯನ್ನೇ ಕೊಚ್ಚಿ ಕೊಂದ ಮಗ!

ತಾಯಿಯೊಂದಿಗೆ ಜಗಳವಾಡಿ ಹೆಂಡತಿ ಮನೆ ಬಿಟ್ಟು ಹೋದ ಕಾರಣ ಸಿಟ್ಟಿಗೆದ್ದ ಮಗ ಹೆತ್ತ ತಾಯಿಯನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ ಬೆಳಗಾವಿಯ ಹಿಂಡಲಗಾ-ಸುಳಗಾ ...

ಬೆಳಗಾವಿ: ತಾಯಿಯೊಂದಿಗೆ ಜಗಳವಾಡಿ ಹೆಂಡತಿ ಮನೆ ಬಿಟ್ಟು  ಹೋದ ಕಾರಣ ಸಿಟ್ಟಿಗೆದ್ದ ಮಗ ಹೆತ್ತ ತಾಯಿಯನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ ಬೆಳಗಾವಿಯ ಹಿಂಡಲಗಾ-ಸುಳಗಾ ಗ್ರಾಮದಲ್ಲಿ ನಡೆದಿದೆ. 
ಹಿಂಡಲಗಾ ಸುಳಗಾ ಗ್ರಾಮದ ಪದ್ಮಾವತಿ ಬಲವಂತ ಚೌಗಲೆ ( 55) ಕೊಲೆಯಾದ ಮಹಿಳೆ, ವಿನಯ ಚೌಗಲೆ (30) ಕೊಲೆ ಮಾಡಿದ ಪುತ್ರ. ಎರಡು ಮದುವೆಯಾಗಿದ್ದ ವಿನಯನ ಮೊದಲನೇ ಪತ್ನಿ ಪರಸ್ಪರ ಮನಸ್ತಾಪದಿಂದ ವಿಚ್ಛೇದನ ಪಡೆದಿದ್ದ.
ನಂತರ ವಿನಯ ಎರಡನೇ ಮದುವೆಯಾಗಿದ್ದ. ಆದರೆ, ತಾಯಿ ಪದ್ಮಾವತಿಗೂ ವಿನಯನ ಎರಡನೇ ಹೆಂಡತಿಗೂ ಆಗಾಗ ಜಗಳ ಆಗುತ್ತಿತ್ತು. ಬುಧವಾರ ವಿನಯ ಕೆಲಸಕ್ಕೆ ಮನೆಯಿಂದ ಹೋದ ನಂತರ ಅತ್ತೆ ಸೊಸೆ ನಡುವೆ ಜಗಳ ನಡೆದಿದೆ. ಇದರಿಂದ ಎರಡನೇ ಹೆಂಡತಿ ಮನೆ ಬಿಟ್ಟು ಹೋಗಿದ್ದಾಳೆ. ಸಂಜೆ ಮನೆಗೆ ಬಂದು ವಿಷಯ ತಿಳಿದ ವಿನಯ ಆಕ್ರೋಶಗೊಂಡು ತಾಯಿಯೊಂದಿಗೆ ಜಗಳ ಮಾಡಿದ್ದಾನೆ. 
ವಾಗ್ವಾದ ವಿಕೋಪಕ್ಕೆ ಹೋದಾಗ ವಿನಯ ತಾಯಿ ಮೇಲೆ ಕುಡಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಪದ್ಮಾವತಿ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕಾಕತಿ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಏನೇ ಆದ್ರೂ, ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

SCROLL FOR NEXT