ರಾಜ್ಯ

ನೀರಸ ಪ್ರತಿಕ್ರಿಯೆಯೊಂದಿಗೆ ಹಂಪಿ ಉತ್ಸವ ಆರಂಭ

Sumana Upadhyaya
ಹಂಪಿ: ಎರಡು ದಿನಗಳ ಹಂಪಿ ಉತ್ಸವಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ. ಆದರೆ ಜಿಲ್ಲಾಡಳಿತ ನಿರೀಕ್ಷೆ ಮಾಡಿದಷ್ಟು ಜನರು ಉತ್ಸವ ವೀಕ್ಷಿಸಲು ಆಗಮಿಸಲಿಲ್ಲ. ವಾರಾಂತ್ಯದ ಪ್ರವಾಸಿಗರು ಬಿಟ್ಟರೆ ಉತ್ಸವ ನೋಡಲೆಂದು ಊರ, ಪರವೂರುಗಳಿಂದ ಅಷ್ಟೊಂದು ಜನರು ವೀಕ್ಷಣೆಗೆ ಬರಲಿಲ್ಲ.
ಪ್ರತಿ 200ರಿಂದ 250 ಮೀಟರ್ ಗಳ ಅಂತರದಲ್ಲಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಾಗಿತ್ತು.ಅತೀವ ಬೇಸಿಗೆ ಇದಕ್ಕೆ ಒಂದು ಕಾರಣವಾಗಿರಬಹುದು. ಬಳ್ಳಾರಿಯಲ್ಲಿ ನಿನ್ನೆ 35 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶವಿತ್ತು. ಉತ್ಸವದ ಆರಂಭದಲ್ಲಿ ಇದ್ದ ಶೋಭ ಯಾತ್ರೆಯಲ್ಲಿ ಕೂಡ ಹೆಚ್ಚು ಜನರು ಭಾಗವಹಿಸಲಿಲ್ಲ. ಅದಲ್ಲದೆ ದ್ವಿತೀಯ ಪಿಯುಸಿ ಪರೀಕ್ಷೆ ಮತ್ತು ಮುಂಬರುವ ದಿನಗಳಲ್ಲಿ ಹತ್ತನೇ ತರಗತಿ ಪರೀಕ್ಷೆಯಿರುವುದು ಕೂಡ ಹೆಚ್ಚು ಜನರು ಬಾರದೇ ಇರುವುದು ಕಾರಣವಾಗಿದೆ.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ ಕೆ ಶಿವಕುಮಾರ್ ಉತ್ಸವವನ್ನು ಉದ್ಘಾಟಿಸಿದರು. ಹಲವು ಸಚಿವರುಗಳು ಕೂಡ ಉಪಸ್ಥಿತರಿದ್ದರು.
SCROLL FOR NEXT