ಅರುಣ್ ನಂದಿಹಳ್ಳಿ 
ರಾಜ್ಯ

ಮಾಜಿ ಶಾಸಕರ ಪುತ್ರ ಅರುಣ್ ನಂದಿಹಳ್ಳಿ ಸಾವಿನ ಪ್ರಕರಣ ಬೇಧಿಸಿದ ಬೆಳಗಾವಿ ಪೊಲೀಸರು

ಮಾಜಿ ಶಾಸಕ ಪರಶುರಾಮ್ ನಂದಿಹಳ್ಳಿ ಸಾವಿನ ಪ್ರಕರಣವನ್ನು ತನಿಖಾ ತಂಡ ಭೇಧಿಸಿದೆ, ಆಕಸ್ಮಿಕವಾಗಿ ಅರುಣ್ ತಮ್ಮನ್ನು ತಾವೇ ಕೊಂದುಕೊಂಡಿದ್ದಾರೆ ಎಂದು ...

ಬೆಳಗಾವಿ: ಮಾಜಿ ಶಾಸಕ ಪರಶುರಾಮ್  ನಂದಿಹಳ್ಳಿ  ಸಾವಿನ ಪ್ರಕರಣವನ್ನು ತನಿಖಾ ತಂಡ ಭೇಧಿಸಿದೆ, ಆಕಸ್ಮಿಕವಾಗಿ ಅರುಣ್ ತಮ್ಮನ್ನು ತಾವೇ ಕೊಂದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅರುಣ್ ನಂದಿಹಳ್ಳಿ ಸಾವು ಕೊಲೆ ಅಥವಾ ಆತ್ಮಹತ್ಯೆಯಲ್ಲ ಎಂದು ಪೊಲೀಸರು ತಿಳಿಸಿದ್ದಾರೆ, ಮಾರ್ಚ್ 19 ರಂದು ಅರುಣ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಮೊದಲು ಅರುಣ್ ಸಾವು ಕೊಲೆ ಎಂದು ಭಾವಿಸಲಾಗಿತ್ತು, ಹೀಗಾಗಿ ಬೆಳಗಾವಿಯಲ್ಲಿ ಉದ್ವಿಘ್ನ ವಾತಾವಾರಣ ಮೂಡಿತ್ತು.
ಪ್ರಕರಣ ಬೇಧಿಸಲು ಪೊಲೀಸರ ಮೇಲೆ ಒತ್ತಡವಿತ್ತು, ಆದರೆ ತಿಂಗಳು ಕಳೆದರು ಯಾವುದೇ ಬೆಳವಣಿಗೆ ಕಂಡು ಬಂದಿಲ್ಲ, ಸುಮಾರು 150 ಕ್ಕೂ ಹೆಚ್ಚು ಮಂದಿಯನ್ನು ಪ್ರಶ್ನಿಸಲಾಗಿತ್ತು, ಆದರೆ ಯಾವುದೇ ಸುಳಿವು ಸಿಗಲಿಲ್ಲ, ಹಾಗಾಗಿ ಪೊಲೀಸರು ಮತ್ತೊಮ್ಮೆ ಹೊಸದಾಗಿ ತನಿಖೆ ಆರಂಭಿಸಿದ್ದರು.
ತನ್ನ ಭುಜಕ್ಕೆ ಗುಂಡು ಹಾರಿಸಿಕೊಳ್ಳುವಾಗ ಆಯತಪ್ಪಿ ತಮ್ಮನ್ನು ತಾವೇ ಶೂಟ್ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ಅರುಣ್ ಎರಡನೇ ಪತ್ನಿ ಗೀತಾ ವರ್ತನೆ ಬಗ್ಗೆ ಪೊಲೀಸರಿಗೆ ಅನುಮಾನ ಬಂದು ವಿಚಾರಣೆ ನಡೆಸಿದ್ದಾರೆ, ಆಕೆಯ ಸಹೋದರ ಮೋಹನ್  ಜೊತೆ ಪೊಲೀಸರು ಮಾತನಾಡಲು ಪ್ರಯತ್ನಿಸಿದ್ದಾರೆ, ಆದರೆ ತನ್ನ ಸಹೋದರ ಮುಗ್ದ ಎಂದು ಆಕೆ ತಿಳಿಸಿದ್ದಾರೆ,  ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ಎಲ್ಲಾ ವಿಷಯ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test: ವಿಂಡೀಸ್ ವಿರುದ್ಧ ಕುಲದೀಪ್ ಯಾದವ್ ಭರ್ಜರಿ ಬೌಲಿಂಗ್, ವಿಶ್ವ ದಾಖಲೆ

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

SCROLL FOR NEXT