ರಾಜ್ಯ

ಕಬಾಬ್ ಅಂಗಡಿ ಮಾಲೀಕನ ಹತ್ಯೆಗೆ ಪತ್ನಿಯೇ ಮೂಲ, ನಾಲ್ವರ ಬಂಧನ

Srinivas Rao BV
ಬೆಂಗಳೂರು: ಕಬಾಬ್ ಅಂಗಡಿ ಮಾಲೀಕನ ಕಣ್ಣಿಗೆ ಖಾರದ ಪುಡಿ ಎರಚಿ ಹತ್ಯೆ ಮಾಡಿರುವ ನಾಲ್ವರು ಆರೋಪಿಗಳನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.
ರವೀಶ್ (44), ಜಿತೇಂದ್ರ (30) ಹಾಗೂ ಸುಮಂತರಾಜ್ (29) ಮತ್ತು ಪ್ರದೀಪ್ ಕುಮಾರ್ (40) ಬಂಧಿತ ಆರೋಪಿಗಳು.
ಮಂಡ್ಯ ಮೂಲದ ಉಮೇಶ್ (37) ಎಂಬುವವರು ನಗರದ ಹೆಗ್ಗನಹಳ್ಳಿಯಲ್ಲಿ ಕಬಾಬ್ ಅಂಗಡಿ ಇಟ್ಟುಕೊಂಡಿದ್ದರು. ಸುಮಾರು 13 ವರ್ಷಗಳ ಹಿಂದೆ ಉಮೇಶ್ ಅವರಿಗೆ ರೂಪ ಎಂಬುವವರೊಂದಿಗೆ ಮದುವೆಯಾಗಿತ್ತು. ಕಿಶೋರ್ ಎಂಬಾತ 7-8 ತಿಂಗಳಿನಿಂದ ಉಮೇಶ್ ಪತ್ನಿ ರೂಪ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಅವಳಿಗೆ ತಿಳಿಯದಂತೆ ಲೈಂಗಿಕ ಕ್ರಿಯೆಯ ಚಿತ್ರೀಕರಣ ಮಾಡಿ ತನ್ನ ಫೇಸ್ ಬುಕ್ ಖಾತೆಗೆ ಹಾಕಿದ್ದನು. ಈ ಕುರಿತು ರೂಪ ಮತ್ತು ಉಮೇಶ್ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಕಿಶೋರನನ್ನು ಬಂಧಿಸಿದ್ದರು. 
ಜಾಮೀನಿನ ಮೇಲೆ ಹೊರ ಬಂದ ಆತ ಸೇಡು ತೀರಿಸಿಕೊಳ್ಳಲು ತನ್ನ ಸಹಚರರೊಂದಿಗೆ ಸೇರಿಕೊಂಡು ಮೇ 12ರಂದು ಉಮೇಶ್ ಅವರನ್ನು ಕೊಲೆ ಮಾಡಿದ್ದರು. ಸದ್ಯ ಆರೋಪಿ ಕಿಶೋರ್ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
SCROLL FOR NEXT