ಎಂಎಂ ಕಲಬುರಗಿ ಮತ್ತು ಗೌರಿ ಲಂಕೇಶ್ 
ರಾಜ್ಯ

ಎಂ.ಎಂ ಕಲ್ಬುರ್ಗಿ ಹತ್ಯೆ ಪ್ರಕರಣ: ಎಸ್ ಐ ಟಿ ವಶಕ್ಕೆ ಅಮೋಲ್ ಕಾಳೆ

ವಿಚಾರವಾದಿ ಹಾಗೂ ಬರಹಗಾರ ಎಂಎಂ ಕಲಬುರಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷಾ ತನಿಖಾ ತಂಡ ಗೌರಿ ಹತ್ಯೆ ಕೇಸ್ ಆರೋಪಿ ಅಮೋಲ್ ...

ಬೆಂಗಳೂರು: ವಿಚಾರವಾದಿ ಹಾಗೂ ಬರಹಗಾರ ಎಂಎಂ ಕಲಬುರಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷಾ ತನಿಖಾ ತಂಡ ಗೌರಿ ಹತ್ಯೆ ಕೇಸ್ ಆರೋಪಿ ಅಮೋಲ್ ಕಾಳೆಯನ್ನು ವಶಕ್ಕೆ ಪಡೆದುಕೊಂಡಿದೆ. 
ವಿಶೇಷ ನ್ಯಾಯಾಲಯ ಕಾಳೆಯನ್ನು 11 ದಿನಗಳ ಪೊಲಿಸ್ ಕಸ್ಟಡಿಗೆ ವಹಿಸಿದೆ. ಹಿಂದೂ ಜನಜಾಗೃತಿ ಸಮಿತಿ  ಮಾಜಿ ಸದಸ್ಯನಾಗಿರುವ ಕಾಳೆಯನ್ನು  ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್ ಐಟಿ ಕಳೆದ ವರ್ಷ ಮೇ ತಿಂಗಳಲ್ಲಿ ಬಂಧಿಸಿತ್ತು. ಪುಣೆಯಲ್ಲಿರುವ ಆತನ ಮನೆಯ ಮೇಲೂ ದಾಳಿ ನಡೆಸಿ ಹಲವು ವಸ್ತುಗಳನ್ನು ವಶಕ್ಕೆ ಪಡೆದಿತ್ತು.
ಹಲವು ವಿಚಾರವಾದಿಗಳ ಹತ್ಯೆ ನಡೆಸಲು ತರಬೇತಿ ಮತ್ತು ಅದರ ಕಾರ್ಯಾಚರಣೆ ಬಗ್ಗೆ ಆತನ ಮನೆಯಲ್ಲಿ  ಮಾಹಿತಿ ಸಿಕ್ಕಿತ್ತು. 
ನಾಲ್ಕು ಹೈ ಪ್ರೊಫೈಲ್ ಮರ್ಡರ್ ಕೇಸ್ ಗಳಲ್ಲಿ ಕಾಳೆಗೆ ನಂಟಿರುವುದಾಗಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಗೌರಿ ಲಂಕೇಶ್, ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ ಹತ್ಯೆಗೂ ಕಾಳೆಗೂ ಸಂಬಂಧವಿದೆ ಎಂದು ಹೇಳಲಾಗಿದೆ, ದಾಬೋಲ್ಕರ್ ಹತ್ಯೆ ಕೋರನಿಗೆ 7.65 ಎಂಎಂ ಕಂಟ್ರಿ ಪಿಸ್ತೂಲ್ ಅನ್ನು ನೀಡಿದ್ದ ಎಂದು ಸಿಬಿಐ ಅಧಿಕಾರಿಗಳು ವಿಶೇಷ ಕೋರ್ಟ್ ಗೆ ತಿಳಿಸಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT