ರಾಜ್ಯ

ಭೀಕರ ರಸ್ತೆ ಅಪಘಾತ: ಬೆಳಗಾವಿ ಮೂಲದ ಐವರ ಸಾವು

Sumana Upadhyaya

ಬೆಳಗಾವಿ: ಏಕಾದಶಿ ಪ್ರಯುಕ್ತ ಪಂಢರಪುರ ವಿಠ್ಠಲನ ದರ್ಶನಕ್ಕೆ ತೆರಳುತ್ತಿದ್ದ ವಾಹನ ಅಪಘಾತಕ್ಕೀಡಾಗಿ ಬೆಳಗಾವಿ ಮೂಲದ ಐವರು ಭಕ್ತರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಸಾಂಗೋಲ್ಯಾ ಸಮೀಪ ಶುಕ್ರವಾರ ನಡೆದಿದೆ.


ಮೃತರನ್ನು ಬೆಳಗಾವಿ ತಾಲೂಕಿನ ಮಂಡೋಳಿ ಗ್ರಾಮದ ಕೃಷ್ಣ ವಾಮನ ಗಾಂವ್ಕರ (50), ಮಹಾದೇವ ಕಣಬರಕರ (48), ಬಾಳು ಅಂಬೇವಾಡಿಕರ (50), ಅರುಣ ದತ್ತು ಮುತಗೇಕರ (38) ಹಾಗೂ ಹಂಗರಗಾ ಗ್ರಾಮದ ಎ.ಎ. ಪಾಟೀಲ್ ಎಂದು ಗುರುತಿಸಲಾಗಿದೆ.


ಇವರು ಮಂಡೋಳಿ ಗ್ರಾಮದಿಂದ ಗುರುವಾರ ರಾತ್ರಿ ಟೆಂಪೋದಲ್ಲಿ ಪಂಢರಪುರಕ್ಕೆ ತೆರಳಿದ್ದರು. ಮಹಾರಾಷ್ಟ್ರದ ಸಾಂಗೋಲ್ಯಾ ಸಮೀಪ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಎದುರಿನಿಂದ ಹೋಗುತ್ತಿದ್ದ ಟ್ರಾಕ್ಟರ್​ಗೆ ಭಕ್ತರಿದ್ದ ಟೆಂಪೋ ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆದಿದೆ.

SCROLL FOR NEXT