ರಾಜ್ಯ

ನದಿಗೆ ಹಾರಿ ದಂಪತಿ ಆತ್ಮಹತ್ಯೆ

Srinivasamurthy VN

ಬಾಗಲಕೋಟೆ: ಘಟಪ್ರಭ ನದಿಗೆ ಹಾರಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಧೋಳ ತಾಲೂಕು ಚಿಂಚಖಂಡಿ ಬಳಿ ಭಾನುವಾರ ಸಂಜೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ದಂಪತಿಯನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಮಕೇರಿ ಗ್ರಾಮದ ಮೌನೇಶ ಪುಂಡಲಿಕ ಕುಂಬಾರ(28), ಅಕ್ಷತಾ ಮೌನೇಶ ಕುಂಬಾರ(25) ಎಂದು ಗುರುತಿಸಲಾಗಿದೆ. ಮೌನೇಶ ಜಿಕೆ. ಸಿಮೆಂಟ್ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದು, ಪತ್ನಿಯೊಂದಿಗೆ ಬೈಕ್ ಮೇಲೆ ಚಿಚಖಂಡಿ ಸೇತುವೆ ಬಳಿ ಬಂದು ಸೇತುವೆ ಮೇಲೆ ಬೈಕ್ ನಿಲ್ಲಿಸಿ ನಮ್ಮ ಸಾವಿಗೆ ನಾವೇ ಕಾರಣರು ಎಂದು ಡೆತ್ ನೋಟ ಬರೆದು ನದಿಗೆ ಹಾರಿದ್ದಾರೆ.


ದಂಪತಿಗಳ ಶವ ಹುಡುಕುವ ಕಾರ್ಯಾಚರಣೆ ನಡೆದಿದ್ದು, ಸಂಜವರೆಗೂ ಶವ ಪತ್ತೆ ಆಗಿರಲಿಲ್ಲ. ಮುಧೋಳ ಲೋಕಾಪುರ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ದಂಪತಿ ಶವ ಪತ್ತೆ ಕಾರ್ಯ ನಡೆಸಿದ್ದಾರೆ.

ವರದಿ: ವಿಠ್ಠಲ ಬಲಕುಂದಿ

SCROLL FOR NEXT