ರಾಜ್ಯ

ಕಲಘಟಗಿ: 'ರುಸ್ತುಂ' ಕೆರೆಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿಗಳ ದುರ್ಮರಣ

Vishwanath S

ಬೆಂಗಳೂರು: ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರೂ ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ವರದಿ ಆಗಿದೆ.
  
ಸೋಮವಾರ ಸಂಜೆ ಕಲಘಟಗಿ ಪಟ್ಟಣದ ರುಸ್ತುಂ ಕೆರೆಯಲ್ಲಿ ವಿನಯ್ ಕುಂಬಾರ್ (15) ಅನೂಪ್ ಹುಬ್ಬಳ್ಳಿ (15) ಎಂಬ ಇಬ್ಬರೂ  ವಿದ್ಯಾರ್ಥಿಗಳು ಈಜೂಲು ಹೋಗಿದ್ದಾಗ ನೀರು ಪಾಲಾಗಿದ್ದರು.

ನಿನ್ನೆ ರಾತ್ರಿಯಿಂದಲೇ ಬಾಲಕರ ಶವಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಕಲಘಟಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಆದರೆ, ಇಂದು ಬೆಳಿಗ್ಗೆ ಇಬ್ಬರ ಮೃತ ದೇಹ ಪತ್ತೆಯಾಗಿದ್ದು, ಅವರ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.

ಈ ಇಬ್ಬರೂ ವಿದ್ಯಾರ್ಥಿಗಳು ಕಲಘಟಗಿ ಪಟ್ಟಣದ ಆದರ್ಶ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. 
  
ಘಟನೆಗೆ ಸಂಬಂಧಿಸಿದಂತೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

SCROLL FOR NEXT