ರಾಜ್ಯ

ಸಾಲ ಮರುಪಾವತಿಸಲಾಗದೆ ರೈತ ಆತ್ಮಹತ್ಯೆ

Sumana Upadhyaya

ಬೆಳಗಾವಿ: ಸಾಲ ಮರುಪಾವತಿಸಲಾಗದೆ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಮಾಡಮಗೇರಿ ಗ್ರಾಮದಲ್ಲಿ ನಡೆದಿದೆ.


ರೈತ ಯಲ್ಲಪ್ಪ ನಾಯ್ಕರ್ (56ವ) ಎಂಬುವವರು ಟ್ಯ್ರಾಕ್ಟರ್ ಖರೀದಿಗಾಗಿ ಸಾಲ ಪಡೆದಿದ್ದರು. ಒಂದು ತಿಂಗಳ ಹಿಂದೆ ಸಾಲ ಮರುಪಾವತಿಸುವಂತೆ ಅಲಹಾಬಾದ್ ಬ್ಯಾಂಕ್ ಅವರಿಗೆ ನೋಟಿಸ್ ನೀಡಿತ್ತು. ಆರ್ಥಿಕ ಸಂಕಷ್ಟದಿಂದ ಮಾನಸಿಕ ಖಿನ್ನತೆಗೆ ಒಳಗಾದ ಅವರು ತಮ್ಮ ಮನೆಯಲ್ಲಿಯೇ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯರಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

SCROLL FOR NEXT