ರಾಜ್ಯ

ದಸರಾ ಹಬ್ಬದ ನಡುವೆ ಜವರಾಯನ ಅಟ್ಟಹಾಸ! ಪ್ರತ್ಯೇಕ ಅಪಘಾತದಲ್ಲಿ 6 ಮಂದಿ ದುರ್ಮರಣ

Raghavendra Adiga

ಕಲಬುರಗಿ/ವಿಜಯಪುರ: ರಾಜ್ಯಾದ್ಯಂತ ದಸರಾ ಸಂಭ್ರಮ ಮನೆ ಮಾಡಿದೆ. ಆದರೆ ಈ ನಡುವೆ ರಾಜ್ಯದ ಉತ್ತರ ಭಾಗದಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು ಆರು ಮಂದಿ ದಾರುಣ ಸಾವಿಗೀಡಾಗಿದ್ದಾರೆ. ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿ ಕಾರು-ಬೈಕ್ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ್ದರೆ ವಿಜಯಪುರ ಜಿಲ್ಲೆ ಮಹಾರಾಷ್ಟ್ರ ಗಡಿ ಸಮೀಪದ ಕುರಗಟಕಿ ಗ್ರಾಮದಲ್ಲಿ ಮರಕ್ಕೆ ಬೈಕ್ ಡಿಕ್ಕಿಯಾಗಿ ಮೂವರು ಸವಾರರು ಮೃತಪಟ್ಟಿದ್ದಾರೆ.

ಚಿಂಚೋಳಿ ಹೊರವಲಯದ ಮೈಲಾರಲಿಂಗ ದೇವಸ್ಥಾನ ಬಳಿ ನಡೆದ ಘಟನೆಯಲ್ಲಿ ಕಾರು ಚಾಲಕ ಶಕೀಲ್​​ಬಾಬು (41) ಹಾಗೂ ದೇಗಲಮಡಿ ಗ್ರಾಮದ ಬೈಕ್ ಸವಾರ ಮಲ್ಲಪ್ಪ (23) ಸ್ಥಳದಲ್ಲೇ ಸಾವನ್ನಪ್ಪಿದರೆ ದ್ವಿಚಕ್ರ ವಾಹನದ ಹಿಂಬದಿ ಸವಾರ  ನಾಶೀರ್ ಕೊರಬಾ (21) ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಹೈದರಾಬಾದ್​ನಿಂದ ಗಡಿಕೇಶ್ವರ ಗ್ರಾಮದತ್ತ ಕಾರು ತೆರಳುತ್ತಿತ್ತು ಎನ್ನಲಾಗಿದ್ದು ದೇಗಲಮಡಿ ಗ್ರಾಮದ ಸಮೀಪದಲ್ಲಿ ಅಪಘಾತವಾಗಿದೆ. ಘಟನೆ ಸಂಬಂಧ ಚಿಂಚೋಳಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರದ ಮಹಾರಾಷ್ಟ್ರ ಗಡಿ ಸಮೀಪದಲ್ಲಿನ ಕುರಗಟಕಿ ಬಳಿ ನಡೆಅ ಘಟನೆಯಲ್ಲಿ ಗ್ರಾಮದ ನಿವಾಸಿಗಳಾದ ಮಹೇಶ ನರೂಟಿ (22), ಅಂಬಜ್ಜ ಹವಮಾನೆ(25) ಮತ್ತು ಲೋಣೆ ಗ್ರಾಮದ ನಿವಾಸಿ ರಾಜಕುಮಾರ ಪೂಜಾರಿ (20) ಮೃತಪಟ್ಟಿದ್ದಾರೆ.ಇವರು ಟಾಕಳಿ ಕಡೆಯಿಂದ ಕುರಗಟಕಿ ಕಡೆ ತೆರಳುತ್ತಿದ್ದರು.ಘಟನೆಯು ಸೋಲಾಪುರದ ಮಂದ್ರೂಪ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

SCROLL FOR NEXT