ರಾಜ್ಯ

ಬೆಳಗಾವಿ: ದುರ್ಗಾ ಮಾತಾ ವಿಸರ್ಜನಾ ಮೆರವಣಿಗೆ ಲಾರಿ ಹರಿದು ಮೂವರ ಸಾವು

Shilpa D

ಬೆಳಗಾವಿ: ದುರ್ಗಾ ಮಾತಾ ವಿಸರ್ಜನಾ ಮೆರವಣಿಗೆ ಹೋಗುತ್ತಿದ್ದ ಲಾರಿ ಮಗುಚಿ ಬಿದ್ದ ಪರಿಣಾಮ ಎರಡು ವರ್ಷ ಪ್ರಾಯದ ಬಾಲಕ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ಬೆಳಗಾವಿಯ ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದ ಈ ಘಟನೆಯಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ,

ಹುಬಸೇನ ಗುಲಪ್ಪನವರ್ (2), ಸಚಿನ್ ಕರಗೌಡ (36) ಹಾಗೂ ಸಂಜಯ್ ರಾವ್ ಸಾಬ್ ಪಾಟೀಲ್ (41) ಮೃತಪಟ್ಟವರು. ಗಾಯಗೊಂಡವರನ್ನು ಮೀರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಾಗವಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

SCROLL FOR NEXT