ರಾಜ್ಯ

ಮೈಸೂರು: ಬೈಕ್ ಕೊಡಿಸದ್ದಕ್ಕೆ ನಾಲೆಗೆ ಹಾರಿ ಯುವಕನ ಆತ್ಮಹತ್ಯೆ

Vishwanath S

ಮಂಡ್ಯ: ಮನೆಯವರು ಬೈಕ್ ಕೊಡಿಸದಿದ್ದಕ್ಕೆ ಕುಪಿತಗೊಂಡ ಯುವಕನೊಬ್ಬ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್. ಬಳಿಯ ವರುಣಾ ನಾಲೆ ಬಳಿ ನಡೆದಿದೆ.

ಮೈಸೂರಿನ ಕುವೆಂಪು ನಗರದ ಹುಡ್ಕೋ ಬಡಾವಣೆಯ ನಿವಾಸಿ ರಾಕೇಶ್(24) ಮೃತ ದುರ್ದೈವಿ ಎನ್ನಲಾಗಿದೆ.

ಮನೆಯಲ್ಲಿ ಬೈಕ್ ಕೊಡಿಸಲಿಲ್ಲ ಎಂದು ವರುಣಾ ನಾಲೆಗೆ ಬಿದ್ದು‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬದ ಮೂಲಗಳಿಂದ‌ ತಿಳಿದು ಬಂದಿದ್ದು, ನಾಲೆಯಲ್ಲಿ ಕೊಚ್ಚಿ ಹೋದ ಯುವಕ‌ನ ಶವಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಕೆ.ಆರ್.ಎಸ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

- ನಾಗಯ್ಯ

SCROLL FOR NEXT