ರಾಜ್ಯ

ಬೆಳಗಾವಿ: ಮಕ್ಕಳಿಗೆ ಈಜು ಕಲಿಸಲು ಹೋದ ತಾಯಿ ನೀರಲ್ಲಿ ಮುಳುಗಿ ಸಾವು

Raghavendra Adiga

ಬೆಳಗಾವಿ: ಮಕ್ಕಳಿಗೆ ಈಜು ಕಲ್ಲಿಸುತ್ತಿದ್ದ ವೇಳೆ ತಾಯಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನೇಜ ಗ್ರಾಮದಲ್ಲಿ ಸಂಭವಿಸಿದೆ.

ಶಿಲ್ಪಾ ಚನ್ನಗೌಡರ ಎಂಬುವವರು ತಮ್ಮ ಮಕ್ಕಳಿಗೆ ಈಜು ಕಲಿಸುತ್ತಿದ್ದರು. ಈ ವೇಳೆ ಮೂರ್ಛೆ ಬಂದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೂರ್ಛೆ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ನೀರಿನಲ್ಲಿದ್ದಾಗಲೇ ಮೂರ್ಚೆ ಬಂದು ಇಹಲೋಕ ತ್ಯಜಿಸಿದ್ದಾರೆ.

ತಾಯಿ ಮುಳುಗುವ ವೇಳೆ ಮಕ್ಕಳು ಜೋರಾಗಿ ಕೂಗಾಡಿದ್ದರು. ಸ್ಥಳೀಯರು ಸ್ಥಳಕ್ಕಾಗಮಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರಿನಲ್ಲಿ ಯುವಕ ನೀರುಪಾಲು

ನೀರು ತರಲು ಹೋಗಿದ್ದಾಗ ನದಿಯಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕೂಡ್ಲುರು ಎಂಬಲ್ಲಿ ವರದಿಯಾಗಿದೆ. 19 ವರ್ಷದ ಧನುಶ್ ಮೃತ ದುರ್ದೈವಿ.

ಸೋದರಮಾವನ ತಿಥಿ ಕಾರ್ಯಕ್ಕೆ ಬಂದಿದ್ದ ಧನುಶ್, ಸಮಾಧಿ ಸ್ವಚ್ಛಗೊಳಿಸಲು ನೀರು ತರಲು ಲಕ್ಷ್ಮಣ ತೀರ್ಥ ನದಿಗೆ ತೆರಳಿದ್ದಾಗ ಆತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

SCROLL FOR NEXT