ರಾಜ್ಯ

ಏಳು ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿದ ರಾಜ್ಯ ಸರ್ಕಾರ 

Sumana Upadhyaya

ಬೆಂಗಳೂರು: ಏಳು ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಉಪ ವಿಭಾಗಾಧಿಕಾರಿಗಳನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.


ಡಾ ವೈ ನವೀನ್ ಭಟ್ ಅವರನ್ನು ಹಾಸನ ಉಪ ವಿಭಾಗಾಧಿಕಾರಿಯಾಗಿ, ಶೇಕ್ ತನ್ವೀರ್ ಆಸೀಫ್ ಅವರನ್ನು ಹೊಸಪೇಟೆ ಉಪ ವಿಭಾಗಾಧಿಕಾರಿ, ಲೋಕಂಡೆ ಸ್ನೇಹ ಸುಧಾಕರ್ ಇಂಡಿ ಉಪ ವಿಭಾಗ, ಅಕ್ಷಯ್ ಶ್ರೀಧರ್ ಬೀದರ್, ಭನ್ವರ್ ಸಿಂಗ್ ಮೀನಾ ಬಸವ ಕಲ್ಯಾಣ, ಡಾ ದಿಲೀಪ್ ಸಸಿ ಲಿಂಗಸಗೂರು ಉಪ ವಿಭಾಗ ಮತ್ತು ಡಾ ಕೆ ನಂದಿನಿದೇವಿ ಮಧುಗಿರಿ ಉಪ ವಿಭಾಗಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

SCROLL FOR NEXT