ರಾಜ್ಯ

ಸಾಲ ತೀರಿದ ಬಳಿಕ ರಮೇಶ್ ಮತ್ತೆ ಕಾಂಗ್ರೆಸ್'ಗೆ ಬರುತ್ತಾರೆ: ಸತೀಶ್ ಜಾರಕಿಹೊಳಿ

Manjula VN

ಬೆಳಗಾವಿ: ಸಾಲ ತೀರಿಸುವ ಸಲುವಾಗಿ ರಮೇಶ್ ಜಾರಕಿಹೊಳಿ ಬಿಜೆಪಿಗೆ ಹೋಗಿದ್ದು, ಸಾಲ ತೀರಿಸಿದ ಬಳಿಕ ಮತ್ತೆ ಕಾಂಗ್ರೆಸ್ ಪಕ್ಷಕ್ಕೇ ಬರುತ್ತಾರೆಂದು ಸಹೋದರ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ದೊಡ್ಡ ಮೊತ್ತದ ಸಾಲ ಮಾಡಿದ್ದರು. ಹೀಗಾಗಿ ಕಾಂಗ್ರೆಸ್ ತೊರೆದಿದ್ದಾರೆ. ಇದೀಗ ಸಾಲ ತೀರಿಸಲು ಬಿಜೆಪಿ ಪಕ್ಷಕ್ಕೆ ಹೋಗಿದ್ದು, ಸಾಲ ತೀರಿಸಿದ ಬಳಿಕ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆಂದು ಹೇಳಿದ್ದಾರೆ. 

ಡಿಸೆಂಬರ್ 5 ಬಳಿಕ ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ನಡುವೆ ಮನಸ್ತಾಪ ಎದುರಾಗಿದೆ. ಗೋಕಾಕ್'ನಲ್ಲಿ ಬಿಜೆಪಿ ವಿರುದ್ಧ ಸೆಣಸಾಡಲು ಕಾಂಗ್ರೆಸ್ ಲಖನ್ ಅವರಿಗೆ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಲಖನ್ ಗೆಲ್ಲಿಸಲು ಸತೀಶ್ ಅವರು ಸಾಕಷ್ಟು ಪ್ರಚಾ್ರ ಕಾರ್ಯಗಳನ್ನು ಮಾಡುತ್ತಿದೆ. ರಮೇಶ್ ಅವರಿಗೆ ಸಂಕಷ್ಟ ಎದುರು ಮಾಡಲು ಇತರೆ ಪಕ್ಷಗಳ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಲು ಸತತ ಯತ್ನಗಳನ್ನು ನಡೆಸುತ್ತಿದ್ದಾರೆ. 

ಇದರಂತೆ ಗೋಕಾಕ್ ವಿಧಾನಸಭಾ ಕ್ಷೇತ್ರದ ಎಲ್ಲಾ 23 ಗ್ರಾಮ ಪಂಚಾಯತಿಗಳು ಈವರೆಗೂ ಎಷ್ಟು ಗ್ರಾಮ ಸಭೆಗಳನ್ನು ನಡೆಸಿದೆ ಎಂಬುದರ ಬಗ್ಗೆ ಆರ್'ಟಿಐ ಬಳಿ ಸತೀಶ್ ಅವರು ಮಾಹಿತಿ ಕೇಳಿದ್ದಾರೆ. ಈ ಮೂಲಕ ಗೋಕಾಕ್ ಗ್ರಾಮ ಪಂಚಾಯತಿಯಲ್ಲಿ ಸತೀಶ್ ಅವರು ಮಾಡಿರುವ ದೋಷಗಳನ್ನು ಬಹಿರಂಗಪಡಿಸಲು ಯತ್ನ ನಡೆಸುತ್ತಿದ್ದಾರೆ. 

SCROLL FOR NEXT