ರಾಜ್ಯ

ಮಹದಾಯಿ ತೀರ್ಪಿನ ಕುರಿತು 45 ದಿನಗಳಲ್ಲಿ ಅಧಿಸೂಚನೆ: ಸಂಸದ ಪ್ರಹ್ಲಾದ್ ಜೋಷಿ

Manjula VN

ಹುಬ್ಬಳ್ಳಿ: ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ನ್ಯಾಯಮಂಡಳಿ ನೀಡಿರುವ ತೀರ್ಪಿನ ಕುರಿತು ಕೇಂದ್ರ ಸರ್ಕಾರ ಮುಂದಿನ 45 ದಿನಗಳಲ್ಲಿ ಅಧಿಸೂಚನೆ ಹೊರಡಿಸಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಷಿ ಭರವಸೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಆದರೆ ಗೋವಾ ಮುಖ್ಯಮಂತ್ರಿ ಮಾತುಕತೆಗೆ ಒಪ್ಪುತ್ತಿಲ್ಲ. ಇದಕ್ಕಾಗಿ ನಾವು ಪರ್ಯಾಯ ಮಾರ್ಗ ಹುಡುಕುತ್ತಿದ್ದೇವೆ. ಇದರ ಫಲಿತಾಂಶ ಶೀರ್ಘ ಹೊರಬಲಿದೆ ಎಂದು ಹೇಳಿದರು. ಆದರೆ ಪರ್ಯಾಯ ಮಾರ್ಗ ಯಾವುದು ಎಂಬುದರ ಬಗ್ಗೆ ಅವರು ಮಾಹಿತಿ ಬಹಿರಂಗಪಡಿಸಿಲ್ಲ.

ಮಹಾದಾಯಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿಲ್ಲ ಎಂಬ ಬಿಜೆಪಿ ನಾಯಕರ ವಿರುದ್ಧದ ಆರೋಪಗಳನ್ನು ಉಲ್ಲೇಖಿಸಿದ ಜೋಶಿ, ಕರ್ನಾಟಕ ಮತ್ತು ಗೋವಾ ನಡುವೆ ಒಮ್ಮತ ಮೂಡಿಸಲು ನಿರಂತರವಾಗಿ ಪ್ರಯತ್ನಗಳು ನಡೆಯುತ್ತಿವೆ, ಆದರೆ ಅದರಿಂದ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಅಂತರ-ರಾಜ್ಯ ನದಿ ವಿವಾದಗಳನ್ನು ವೇಗವಾಗಿ ಪರಿಹರಿಸಲಾಗುವುದಿಲ್ಲ ಮತ್ತು ಅವು ಹಲವಾರು ದಶಕಗಳವರೆಗೆ ಮುಂದುವರಿದಿರುವ ಇತಿಹಾಸವಿದೆ. ಇದಕ್ಕೆ ಕಾವೇರಿ ವಿವಾದವೂ ಒಂದು ಉದಾಹರಣೆಯಾಗಿದೆ ಎಂದು ಹೇಳಿದರು.

SCROLL FOR NEXT