ಬೆಂಗಳೂರು: ಉತ್ತರ ಕರ್ನಾಟಕ ಮತ್ತೆ ಮಂದಿ ಪ್ರವಾಹಕ್ಕೆ ತುತ್ತಾಗಿದೆ. ಹಿಂದೂ ಮಹಾಸಾಗರದಲ್ಲಿ ಕಂಡು ಬಂದಿರುವ ತೀವ್ರ ವಾಯುಭಾರ ಕುಸಿತದಿಂದ ರಾಜ್ಯಾದ್ಯಂತ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ರಾಜಧಾನಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳು ನರೆಯಿಂದ ತತ್ತರಿಸಿವೆ.
ಹಾವೇರಿಯ ಹಿರೇಕೆರೂರಿನ ಸುಣ್ಣದ ಕಾಲುವೆಯಲ್ಲಿ 14 ವರ್ಷದ ಶೋಯೆಬ್ ಎಂಬ ಹುಡುಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.
ನಿನ್ನೆ ತಡರಾತ್ರಿ ಮಳೆಗೆ ಬಸವರಾಜ್ ಎಂಬ ವೃದ್ಧ ಕೊಚ್ಚಿ ಹೋಗಿದ್ದು, ಆತನ ಶವ ಕೂಡ ಹೆಗ್ಗೇರಿ ಕೆರೆಯಲ್ಲಿ ಪತ್ತೆಯಾಗಿದೆ. ಇನ್ನು ಇದೇ ಕೆರೆಯಲ್ಲಿ ಮತ್ತೊಬ್ಬ 45 ವರ್ಷದ ಅನಾಥ ಶವ ಪತ್ತೆಯಾಗಿದ್ದು, ನೀರಿನಲ್ಲಿ ಕೊಚ್ಚಿ ಕೊಂಡು ಇಲ್ಲಿ ಬಂದಿದೆ ಎನ್ನಲಾಗಿದೆ.