ರಾಜ್ಯ

ಕಾಲೇಜು ವ್ಯವಸ್ಥಾಪಕ ಕಿರುಕುಳ: ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

Sumana Upadhyaya

ಬೆಂಗಳೂರು: ನಗರದ ಅಮೃತ ಎಂಜಿನಿಯರಿಂಗ್ ಕಾಲೇಜಿನ ಏಳನೇ ಮಹಡಿಯಿಂದ ಕೆಳಗೆ ಧುಮುಕಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.


22 ವರ್ಷದ ಶ್ರೀ ಹರ್ಷ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಕಾಲೇಜು ವ್ಯವಸ್ಥಾಪಕರಿಂದ ಕಿರುಕುಳ ತಾಳಲಾರದೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.


ಹಾಸ್ಟೆಲ್ ನಲ್ಲಿ ನೀರಿಗೆ ತೊಂದರೆಯಿದೆ ಎಂದು ಶ್ರೀಹರ್ಷ ದೂರು ನೀಡಿದ್ದರಂತೆ. ಇದಕ್ಕೆ ಕಾಲೇಜು ಮಂಡಳಿ ಶ್ರೀಹರ್ಷನನ್ನು ಕಾಲೇಜಿನಿಂದ ತೆಗೆದುಹಾಕಿ ಮೊನ್ನೆ ಸೋಮವಾರ ಆತನ ಪೋಷಕರಿಗೆ ಬಂದು ಮಾತನಾಡುವಂತೆ ಸೂಚನೆ ನೀಡಿತ್ತು.
ಶ್ರೀಹರ್ಷನ ತಂದೆ ಆಂಧ್ರ ಪ್ರದೇಶದಿಂದ ಬಂದರೂ ಕೂಡ ಕಾಲೇಜಿನ ಒಳಗೆ ಬಿಟ್ಟಿರಲಿಲ್ಲ. ಈ ವಿಷಯ ತಿಳಿದು ಶ್ರೀಹರ್ಷ ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಕೂಡಲೇ ಕಾಲೇಜಿನ ಇತರ ವಿದ್ಯಾರ್ಥಿಗಳು ಶ್ರೀಹರ್ಷನ ಆತ್ಮಹತ್ಯೆಯನ್ನು ಖಂಡಿಸಿ ಕಾಲೇಜು ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು. ಕಾಲೇಜಿನ ಕಿಟಕಿಗಳನ್ನು ಮುರಿದರು. 


ಪರಪ್ಪನ ಅಗ್ರಹಾರ ಪೊಲೀಸರು ಅಸಹಜ ಸಾವು ಎಂದು ದೂರು ದಾಖಲಿಸಿ ವ್ಯವಸ್ಥಾಪಕ ಮಂಡಳಿಯನ್ನು ವಿಚಾರಣೆಗೆ ಕರೆದಿದ್ದಾರೆ.

SCROLL FOR NEXT