ರಾಜ್ಯ

ಬಂಡೀಪುರ ಕಾಡಂಚಿನ ಗ್ರಾಮದಲ್ಲಿ ಕರಡಿ ದಾಳಿಗೆ ವೃದ್ಧ ಬಲಿ

Lingaraj Badiger

ಚಾಮರಾಜನಗರ: ವೃದ್ಧರೊಬ್ಬರು ಕರಡಿ ದಾಳಿಗೆ ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮಾದಪಟ್ಟಣ ಗ್ರಾಮದಲ್ಲಿ ನಡೆದಿದೆ.

ಓಂಕಾರ್ ಅರಣ್ಯ ವಲಯ ವ್ಯಾಪ್ತಿಯ ಜಮೀನಿನಲ್ಲಿ ಇದ್ದ ವೇಳೆ ವೃದ್ಧ ಮಹದೇವ ಶೆಟ್ಟಿ(70) ಎಂಬುವರು ಕರಡಿ ದಾಳಿಗೆ ಬಲಿಯಾಗಿದ್ದಾರೆ. 
ಓಂಕಾರ್ ಅರಣ್ಯ ವಲಯ ವ್ಯಾಪ್ತಿಯಲ್ಲಿ ಕರಡಿ ಹೆಚ್ಚಿರುವುದರಿಂದ ಕರಡಿ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ತೆರಕಣಾಂಬಿ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ‌.

ಗಡಿ ಜಿಲ್ಲೆಯಲ್ಲಿ ಪ್ರಾಣಿಗಳ ಉಪಟಳ ಮಿತಿಮೀರಿದ್ದು ಹುಲಿ, ಚಿರತೆ, ಆನೆ ಬಳಿಕ ಈಗ ಜನರಿಗೆ ಕರಡಿ ಭೀತಿ ಶುರುವಾಗಿದೆ.

ಕೊಲೆಯೂ ಆಗಿರಬಹುದು
ವ್ಯಕ್ತಿಯ ಮುಖದ ಮೇಲೆ ಮಾತ್ರ ಗಾಯದ ಗುರುತುಗಳಿದ್ದು, ಯರಾದರೂ ಕೊಲೆ ಮಾಡಿ ಬಿಸಾಡಿದ ಬಳಿಕ ಕಾಡುಪ್ರಾಣಿಗಳು ತಿಂದು ಹಾಕಿರುವ ಶಂಕೆಯೂ ವ್ಯಕ್ತವಾಗಿದೆ.

ವರದಿ: ನಂದೀಶ್

SCROLL FOR NEXT