ರಾಜ್ಯ

ಯಾದಗಿರಿ: ಬಸ್ಸು ಹರಿದು ಬಾಲಕ ದುರ್ಮರಣ

Raghavendra Adiga

ಯಾದಗಿರಿ: ಅಜ್ಜಿ , ಮೊಮ್ಮಗನ ಮೇಲೆ ಬಸ್ಸು ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಹಾಪುರ ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ‌ ಮಂಗಳವಾರ ನಡೆದಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

ಮಹಮ್ಮದ್ ಮುಬಾರಕ್(5) ಮೃತಪಟ್ಟಿರುವ ಬಾಲಕ. ಅಜ್ಜಿ ನೂರ್ ಬೇಗಂ(42) ಅವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ರಸ್ತೆ ದಾಟುತ್ತಿರುವುದನ್ನು ಗಮನಿಸದ ಕೆಎಸ್‍ಆರ್ ಟಿಸಿಚಾಲಕ ಏಕಾಏಕಿ ಬಸ್ ಸ್ಟಾರ್ಟ್ ಮಾಡಿದ್ದು ಮುಂದೆ ಚಲಿಸಿದ ಕಾರಣ ಇಬ್ಬರೂ ಬಸ್ ಚಕ್ರದಡಿ ಸಿಕ್ಕಿದ್ದಾರೆ.ಘಟನೆ ಕುರಿತಂತೆ  ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT