ನಿವೃತ್ತಿಯಂಚಿನಲ್ಲಿ 'ಕಾಡುಗಳ್ಳರ ಹಂಟರ್' ಬಂಡೀಪುರದ ರಾಣಾ! 
ರಾಜ್ಯ

ನಿವೃತ್ತಿಯಂಚಿನಲ್ಲಿ 'ಕಾಡುಗಳ್ಳರ ಹಂಟರ್' ಬಂಡೀಪುರದ ರಾಣಾ!

ಯಾವುದೇ ಡಿಸ್ಟರ್ಬೆನ್ಸ್ ಇಲ್ಲಾಂದ್ರೆ 30-40 ಕಿ.ಮೀ. ದೂರದವರೆಗೂ ವಾಸನೆ ಮೂಲಕವೇ ಕಳ್ಳರನ್ನು ಹಿಡಿಯುತ್ತಿದ್ದ ರಾಣಾನಿಗೆ ವಯಸ್ಸಾಗುತ್ತಿರುವುದರಿಂದ ಕೆಲವೇ ತಿಂಗಳುಗಳಲ್ಲಿ ರಾಣಾ ನಿವೃತ್ತಿಯಾಗಲಿದ್ದಾನೆ.

ಬಂಡೀಪುರ ಅರಣ್ಯ ಪ್ರದೇಶದಲ್ಲಿ‌ ತೇಗ, ಹೊನ್ನೆಯಂತಹ ಸಂಪದ್ಭರಿತ ಮರಗಳಿದ್ದು ಇವುಗಳ ಮೇಲೆ ಯಾವಾಗಲೂ ಇರುತ್ತಿದ್ದ ಮರಗಳ್ಳರ ಕಣ್ಣು ಈಗ ಪೊಲೀಸ್​ ನಾಯಿ ರಾಣಾನಿಂದ ತಪ್ಪಿದೆ ಎನ್ನಬಹುದು. ಯಾವುದೇ ಡಿಸ್ಟರ್ಬೆನ್ಸ್ ಇಲ್ಲಾಂದ್ರೆ 30-40 ಕಿ.ಮೀ. ದೂರದವರೆಗೂ ವಾಸನೆ ಮೂಲಕವೇ ಕಳ್ಳರನ್ನು ಹಿಡಿಯುತ್ತಿದ್ದ ರಾಣಾನಿಗೆ ವಯಸ್ಸಾಗುತ್ತಿರುವುದರಿಂದ ಕೆಲವೇ ತಿಂಗಳುಗಳಲ್ಲಿ ರಾಣಾ ನಿವೃತ್ತಿಯಾಗಲಿದ್ದಾನೆ.

ಚಾಮರಾಜನಗರ: ಕ್ಷಣಾರ್ಧದಲ್ಲಿ ಕಾಡುಗಳ್ಳರನ್ನು, ನಾಡಿಗೆ ಬಂದ ವನ್ಯಜೀವಿಗಳ ಇರುವಿಕೆಯನ್ನು ಪತ್ತೆಹಚ್ಚುತ್ತಿದ್ದ ಬಂಡೀಪುರ ಹುಲಿ ಸುರಕ್ಷಿತ ಪ್ರದೇಶದ ಸ್ಪೆಷಲ್ ಇನ್ವೆಸ್ಟಿಗೇಟರ್ ರಾಣಾ ಮುಂದಿನ ವರ್ಷ ನಿವೃತ್ತಿಯಾಗುತ್ತಿದ್ದಾನೆ.ಪೊಲೀಸ್​​ ಶ್ವಾನ ರಾಣಾನಿಗೆ 8 ವರ್ಷವಾಗುತ್ತಿದೆ. ರಾಣಾನ ಸೂಕ್ಷ್ಮ ವಾಸನಾಗ್ರಹಿಗಳು ಕುಂದದಿದ್ದರೂ ವಯೋಮಾನಕ್ಕುಗುಣವಾಗಿ ನಿವೃತ್ತಿಯಂಚಿಗೆ ಬಂದು ನಿಂತಿದ್ದಾನೆ. ಬಂಡೀಪುರದ ಮುಕುಟಮಣಿಯಾಗಿದ್ದ ಪ್ರಿನ್ಸ್ ಹುಲಿಯಂತೆ ರಾಣಾ ಕೂಡ ತನ್ನ ಸಾಹಸಕಾರ್ಯದಿಂದ ತನ್ನದೇ ಆದ ಅಭಿಮಾನಿ ಬಳಗ ಹೊಂದಿದ್ದು ಅವನ‌ ಅಭಿಮಾನಿಗಳಿಗೆ ಈ ನಿವೃತ್ತಿಯ ಸುದ್ದಿ ನಿಜಕ್ಕೂ ಬೇಸರ ತರಿಸಬಹುದು. ಈ ಬಗ್ಗೆ ಬಂಡೀಪುರ ಸಿಎಫ್ಒ ಬಾಲಚಂದ್ರ ಮತ್ತು ರಾಣಾನನ್ನು ನೋಡಿಕೊಳ್ಳುತ್ತಿರುವ ಕಾಳ  ತಿಳಿಸಿದ್ದಾರೆ.

ರಾಣಾ ಜರ್ಮನ್ ಶಫರ್ಡ್ ಜಾತಿಯ ಶ್ವಾನವಾಗಿದ್ದು, 9 ತಿಂಗಳು ಮಧ್ಯಪ್ರದೇಶದಲ್ಲಿ 11 ತಿಂಗಳು ತರಬೇತಿ ಪಡೆದಿತ್ತು. ಪ್ರಕಾಶ್ ಎಂಬವರು ಈ ರಾಣಾನನ್ನು ನೋಡಿಕೊಳ್ಳುತ್ತಿದ್ದರು. ಈಗ ಕಾಳ ಎಂಬವರು ಶ್ವಾನದ ಮೇಂಟರ್ ಆಗಿದ್ದು, ಇವರನ್ನು ಬಿಟ್ಟು ಬೇರಿನ್ಯಾರ ಮಾತನ್ನು ರಾಣಾ ಕೇಳಲ್ಲ, ಬೇರೆಯವರು ನೀಡಿದ ತಿ‌ನಿಸನ್ನು ತಿನ್ನಲ್ಲ ಈ ಸೂಪರ್ ಡಾಗ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

'30 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ,ಇನ್ನು ಸಾಧ್ಯವಿಲ್ಲ': ನಿವೃತ್ತಿಯ ಸುಳಿವು ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ; ಹೊಸ ಪೀಳಿಗೆಗೆ ದಾರಿ ಮಾಡಿಕೊಡುವ ಇಂಗಿತ!

2013ರ ಲೈಂಗಿಕ ದೌರ್ಜನ್ಯ ಪ್ರಕರಣ: Tehelka ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಸುಪ್ರೀಂ ಕೋರ್ಟ್‌ ಶಾಕ್‌; 2 ವಾರಗಳಲ್ಲಿ ಶರಣಾಗುವಂತೆ ಖಡಕ್ ಸೂಚನೆ..!

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!