ರಾಜ್ಯ

ಬೆಂಗಳೂರು: ಮಗ-ಸೊಸೆ ಕಿರುಕುಳ ತಾಳದೆ ವೃದ್ದ ದಂಪತಿ ಆತ್ಮಹತ್ಯೆ

Raghavendra Adiga

ಬೆಂಗಳೂರು: ಸ್ವಂತ ಮಗ-ಸೊಸೆಯ ಕಿರುಕುಳದಿಂದ ಬೇಸತ್ತು ವೃದ್ದ ದಂಪತಿಗಳು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ.

ಮಗ-ಸೊಸೆ ನಮ್ಮನ್ನು ನಿರ್ಲಕ್ಷಿಸಿದ್ದಾರೆ. ಅತಿಯಾದ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಬರೆದಿಟ್ಟು ದಂಪತಿಗಳಾದ ಗಿರಿನಗರ ನಿವಾಸಿ ಬಿಇಎಲ್‌ನ ನಿವೃತ್ತ ಅಧಿಕಾರಿ ಕೃಷ್ಣಮೂರ್ತಿ(70) ಅವರ ಪತ್ನಿ ಸ್ವರ್ಣಮೂರ್ತಿ (68)  ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತಂತೆ  ಆರೋಪಿಗಳಾದ ಸೊಸೆ ಸ್ನೇಹ ಹಾಗೂ ಮಗ ಮಂಜುನಾಥ್ ವಿರುದ್ಧ  ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಕಳೆದ ಶನಿವಾರ ರಾತ್ರಿ ನಡೆದ ಘಟನೆಯಲ್ಲಿ ಪುತ್ರ ಸಾಫ್ಟ್ ವೇರ್ ಇಂಜಿನಿಯರ್ ಮಂಜುನಾಥ್‌ ಮತ್ತು ಸೊಸೆ ಸ್ನೇಹಾ ಸೂರ್ಯನಾರಾಯಣ ಅವರುಗಳು ನಮಗೆ ಚಿತ್ರಹಿಂಸೆ ನೀಡುತ್ತಿದ್ದಾರೆ. ದೈಹಿಕ, ಮಾನಸಿಕ ಹಿಂಸೆ ಕೊಡುತ್ತಿದ್ದಾರೆ ಎಂದು ಕೃಷ್ಣಮೂರ್ತಿತಾವು ಸಾಯುವುದಕ್ಕೆ ಮುನ್ನ ಮನೆಯ ಗೋಡೆ ಮೇಲೆ ಬರೆದು ಸಹಿ ಮಾಡಿದ್ದರು. ಅಲ್ಲದೆ ಸ್ವರ್ಣಮೂರ್ತಿ ತಮ್ಮ ಹಣೆ ಮೇಲೆ  “ನನ್ನನ್ನು ಕ್ಷಮಿಸು” ಎಂದು ಬರೆದುಕೊಂಡಿರುವುದು ಕಂಡುಬಂದಿದೆ.

SCROLL FOR NEXT