ರಾಜ್ಯ

ನಾಡಹಬ್ಬ ದಸರಾಗೆ ವಿಶ್ವಚಾಂಪಿಯನ್ ತಾರೆ: ಯುವ ದಸರಾಗೆ ಚಾಲನೆ ನೀಡಲಿರುವ ಪಿವಿ ಸಿಂಧು

Raghavendra Adiga

ಬೆಂಗಳೂರು: ಅಕ್ಟೋಬರ್ 1 ರಂದು ಆರಂಭವಾಗಲಿರುವ 'ಯುವ ದಸರಾ' ಕಾರ್ಯಕ್ರಮ ಉದ್ಘಾಟನೆ ನೆರವೇರಿಸಲು ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್ ಆಟಗಾರ್ತಿ ಪಿ ವಿ ಸಿಂಧು ಅವರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆಹ್ವಾನಿಸಿದ್ದಾರೆ 

ಈ ಸಂಬಂಧ ಸಿಂಧು ಅವರಿಗೆ ಯಡಿಯೂರಪ್ಪ ಪತ್ರ ಬರೆದಿದ್ದಾರೆ

ರಾಜ್ಯ ಸರ್ಕಾರ ಆಯೋಜಿಸಿರುವ ದಸರಾ ಉತ್ಸವ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ  ಪಡೆದಿದ್ದು, ವಿಶ್ವಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ,ಇದೊಂದು ಸಂಪ್ರದಾಯ,ಸಾಂಸ್ಕೃತಿಕ,ಕಲೆ ಹಾಗೂ ಧಾರ್ಮಿಕ ಉತ್ಸವವಾಗಿದ್ದು, ಒಂಭತ್ತು ದಿನಗಳ ಕಾಲ ನಡೆಯುವ ಈ ಆಚರಣೆ ರಾಜ್ಯದ ಪ್ರತಿಷ್ಠೆಯಾಗಿದೆ.ಪೀಳಿಗೆಯಿಂದ ಪೀಳಿಗೆ ನಡೆಸಿಕೊಂಡು ಬರುತ್ತಿರುವ ದಸರ ಉತ್ಸವಕ್ಕೆ ಹಲವಾರು ಸಾಧಕರು ಸಾಕ್ಷಿಯಾಗಿದ್ದಾರೆ.

ಕ್ರೀಡಾ ತಾರೆಯಾಗಿರುವ ತಾವು ದೇಶವೇ ಹೆಮ್ಮೆಪಡುವಂತೆ ವಿಶ್ವ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ  ಸಾಧನೆ ಮಾಡಿದ್ದು, ದೇಶದ ಕೀರ್ತಿ ಪತಾಕೆ  ಹಾರಿಸಿದ್ದೀರಿ.ಯುವ ದಸರಾಕ್ಕೆ ತಾವು ಆಗಮಿಸುವುದರಿಂದ ಯುವ ಮನಸುಗಳಿಗೆ ಗುರಿಗ ತಲುಪಿ ಸಾಧನೆ ಮಾಡಲು ಪ್ರೇರಣೆ ದೊರೆಯಲಿದೆ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

SCROLL FOR NEXT