ರಾಜ್ಯ

6-5=2 ಚಿತ್ರದ ಮಾದರಿಯಲ್ಲೇ ಬೆಂಗಳೂರು ಮೂಲದ ಯುವಕ ಕುಮಾರ ಪರ್ವತದಲ್ಲಿ ನಾಪತ್ತೆ!

Vishwanath S

ಕುಕ್ಕೆ ಸುಬ್ರಹ್ಮಣ್ಯ: ಕುಮಾರ ಪರ್ವತಕ್ಕೆ ಚಾರಣ ಹೊರಟಿದ್ದ ತಂಡದ ಪೈಕಿ ಬೆಂಗಳೂರು ಮೂಲದ ಯುವಕನೋರ್ವ ನಾಪತ್ತೆಯಾಗಿದ್ದಾನೆ. 

ಬೆಂಗಳೂರಿನ ಗಾಯತ್ರಿನಗರ ನಿವಾಸಿ 25 ವರ್ಷ ವಯಸ್ಸಿನ ಸಂತೋಷ್ ಎಂಬಾತ ಬೆಟ್ಟದ ಹಾದಿಯಲ್ಲಿ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಬೆಂಗಳೂರು ಕಾಳಿಕಾನಗರ ನಿವಾಸಿ ದರ್ಶನ್ ಎಂಬುವರು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡಿದ್ದಾರೆ.

12 ಯುವ ಚಾರಣಿಗರ ಬೆಂಗಳೂರು ತಂಡ ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಈ ತಂಡ ಚಾರಣಕ್ಕೆ ಹೋಗಿತ್ತು. ಶನಿವಾರ ಕುಕ್ಕೆ ಸುಬ್ರಹ್ಮಣ್ಯದ ಮೂಲಕ ಚಾರಣ ಆರಂಭಿಸಿದ್ದರು.

12 ಜನರ ಪೈಕಿ ಐವರು ಮುಂದೆ ಬಂದಿದ್ದು, ಸುಸ್ತಾಗಿದ್ದ ಆರು ಮಂದಿ ಹಿಂದಿನಿಂದ ಬರುತ್ತಿದ್ದರು. ಎರಡು ತಂಡಗಳ ನಡುವೆ ಅಂತರವಿತ್ತು ಎನ್ನಲಾಗಿದೆ. ಇನ್ನು ಏಕಾಂಗಿಯಾಗಿ ಬರುತ್ತಿದ್ದ ಸಂತೋಷ್ ಪರ್ವತ ಹಾದಿ ಮಧ್ಯೆ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. 

SCROLL FOR NEXT