ಸಂತೋಷ್ 
ರಾಜ್ಯ

6-5=2 ಚಿತ್ರದ ಮಾದರಿಯಲ್ಲೇ ಬೆಂಗಳೂರು ಮೂಲದ ಯುವಕ ಕುಮಾರ ಪರ್ವತದಲ್ಲಿ ನಾಪತ್ತೆ!

ಕುಮಾರ ಪರ್ವತಕ್ಕೆ ಚಾರಣ ಹೊರಟಿದ್ದ ತಂಡದ ಪೈಕಿ ಬೆಂಗಳೂರು ಮೂಲದ ಯುವಕನೋರ್ವ ನಾಪತ್ತೆಯಾಗಿದ್ದಾನೆ.

ಕುಕ್ಕೆ ಸುಬ್ರಹ್ಮಣ್ಯ: ಕುಮಾರ ಪರ್ವತಕ್ಕೆ ಚಾರಣ ಹೊರಟಿದ್ದ ತಂಡದ ಪೈಕಿ ಬೆಂಗಳೂರು ಮೂಲದ ಯುವಕನೋರ್ವ ನಾಪತ್ತೆಯಾಗಿದ್ದಾನೆ. 

ಬೆಂಗಳೂರಿನ ಗಾಯತ್ರಿನಗರ ನಿವಾಸಿ 25 ವರ್ಷ ವಯಸ್ಸಿನ ಸಂತೋಷ್ ಎಂಬಾತ ಬೆಟ್ಟದ ಹಾದಿಯಲ್ಲಿ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಬೆಂಗಳೂರು ಕಾಳಿಕಾನಗರ ನಿವಾಸಿ ದರ್ಶನ್ ಎಂಬುವರು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡಿದ್ದಾರೆ.

12 ಯುವ ಚಾರಣಿಗರ ಬೆಂಗಳೂರು ತಂಡ ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಈ ತಂಡ ಚಾರಣಕ್ಕೆ ಹೋಗಿತ್ತು. ಶನಿವಾರ ಕುಕ್ಕೆ ಸುಬ್ರಹ್ಮಣ್ಯದ ಮೂಲಕ ಚಾರಣ ಆರಂಭಿಸಿದ್ದರು.

12 ಜನರ ಪೈಕಿ ಐವರು ಮುಂದೆ ಬಂದಿದ್ದು, ಸುಸ್ತಾಗಿದ್ದ ಆರು ಮಂದಿ ಹಿಂದಿನಿಂದ ಬರುತ್ತಿದ್ದರು. ಎರಡು ತಂಡಗಳ ನಡುವೆ ಅಂತರವಿತ್ತು ಎನ್ನಲಾಗಿದೆ. ಇನ್ನು ಏಕಾಂಗಿಯಾಗಿ ಬರುತ್ತಿದ್ದ ಸಂತೋಷ್ ಪರ್ವತ ಹಾದಿ ಮಧ್ಯೆ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT