ರಾಜ್ಯ

ಬಾಗಲಕೋಟೆ: ಎರಡೂವರೆ ವರ್ಷದ ಪುಟ್ಟ ಬಾಲಕಿ ಸಂಶಾಯಸ್ಪದ ಸಾವು, ತಂದೆ ವಿರುದ್ಧ ದೂರು ದಾಖಲು

Raghavendra Adiga

ಬಾಗಲಕೋಟೆ: ಎರಡೂವರೆ ವರ್ಷದ ಬಾಲಕಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ನಡೆದಿದೆ.

ಮೃತಪಟ್ಟ ಬಾಲಕಿಯನ್ನು ವೈಷ್ಣವಿ ಎಂದು ಗುರುತಿಸಲಾಗಿದೆ. ಆಕೆಯ ತಂದೆ ಧರೆಪ್ಪ ತರದಾಳ ಕೊಲೆ ಮಾಡಿದ್ದಾನೆ ಎಂದು ಮಗುವಿನ ತಾಯಿಯ ಪೋಷಕರು ತೇರದಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಧರೆಪ್ಪ, ಒಂದೂವರೆ ವರ್ಷದ ಹಿಂದೆ ಪತ್ನಿ ವಂದನಾ ಎಂಬುವವರನ್ನು ಅನೈತಿಕ ಸಂಬಂಧ ಹೊಂದಿದ್ದಾರೆಂದು ಶಂಕಿಸಿ ಹತ್ಯೆಗೈದು ಜೈಲು ಸೇರಿದ್ದ. ನಂತರ ಪತ್ನಿಯ ಪೋಷಕರು ಹಾಗೂ ಧರೆಪ್ಪ ನಡುವೆ ರಾಜೀಮಾತುಕತೆ ನಡೆದು ಪ್ರಕರಣಕ್ಕೆ ಅಂತ್ಯಹಾಡಲಾಗಿತ್ತು.

ಇದಾಗಿ ಕೆಲ ದಿನಗಳ ನಂತರ ಧರೆಪ್ಪ ತನ್ನ ಮಗಳು ವೈಷ್ಣವಿಯನ್ನು ತನಗೆ ನಿಡಬೇಕೆಂದು ಬೇಡಿಕೆ ಇಟ್ಟಿದ್ದ. ಅದಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ. ನ್ಯಾಯಾಲಯದ ಆದೇಶದನ್ವಯ ಮಗಳನ್ನು ಕರೆದೊಯ್ದಿದ್ದ. 

ಆದರೆ ಈಗ ವೈಷ್ಣವಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಮಗುವನ್ನು ತಂದೆಯೇ ಕೊಲೆ ಮಾಡಿದ್ದಾನೆಂದು ಮಗುವಿನ ತಾಯಿ ಮನೆಯವರು ಆರೋಪಿಸಿದ್ದಾರೆ.ಘಟನೆ ಕುರಿತಂತೆ ತೆರೆದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT