ಸಂಗ್ರಹ ಚಿತ್ರ 
ರಾಜ್ಯ

ಬಿಎಂಟಿಸಿಯಲ್ಲಿ ಮುಂದುವರೆದ ಕಿರಿಕಿರಿ: ಚಿಲ್ಲರೆ ಇಲ್ಲ ಎಂದು ಪ್ರಯಾಣಿಕನ ಕೆಳಗಿಳಿಸಿದ ನಿರ್ವಾಹಕಿ 

ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಕರಿಗೆ ಪ್ರತೀನಿತ್ಯ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಬಸ್ ನಿರ್ವಾಹಕರು ಹಾಗೂ ಚಾಲಕರ ವಿರುದ್ಧ ದೂರುಗಳು ದಾಖಲಾಗುವುದೂ ಕೂಡ ಹೊಸದೇನಲ್ಲ. ಆದರೆ, ಈ ಬಾರಿ ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ಪ್ರಯಾಣಿಕರೊಬ್ಬರನ್ನು ಕೆಳಗಿಳಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. 

ಬೆಂಗಳೂರು: ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಕರಿಗೆ ಪ್ರತೀನಿತ್ಯ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಬಸ್ ನಿರ್ವಾಹಕರು ಹಾಗೂ ಚಾಲಕರ ವಿರುದ್ಧ ದೂರುಗಳು ದಾಖಲಾಗುವುದೂ ಕೂಡ ಹೊಸದೇನಲ್ಲ. ಆದರೆ, ಈ ಬಾರಿ ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ಪ್ರಯಾಣಿಕರೊಬ್ಬರನ್ನು ಕೆಳಗಿಳಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. 

ಜಾಲಹಳ್ಳಿಯಿಂದ ಬೃಂದಾವನ (ಪೀಣ್ಯ2ನೇ ಹಂತ)ಕ್ಕೆ ತೆರಳುತ್ತಿದ್ದೆ. ಬಸ್ ಖಾಲಿಯಿತ್ತು. ಬಸ್ ಮುಂದೆ ಸಾಗಲು ಆರಂಭವಾಗುತ್ತಿದ್ದಂತೆಯೇ ಲೇಡಿ ಕಂಡೆಕ್ಟರ್ ಒಬ್ಬರು ಬಂದು ಎಲ್ಲಿಗೆ ಹೋಗಬೇಕೆಂದು ಕೇಳಿದರು. ಈ ವೇಳೆ ಟಿಕೆಟ್ ಕೊಡಲು ರೂ.100 ಕೊಟ್ಟಿದ್ದೆ. ಬಳಿಕ ಮುಂದಿನ ನಿಲ್ದಾಣದಲ್ಲಿ ಕೂಡಲೇ ಇಳಿದು ಹೋಗುವಂತೆ ತಿಳಿಸಿದರು. ಇದಾದ ಬಳಿಕ ಹಲವು ಪ್ರಯಾಣಿಕರು ಬಸ್ ಹತ್ತಿದ್ದರು. ಎಲ್ಲರೂ ಚಿಲ್ಲರೆಯನ್ನೇ ನೀಡಿದ್ದರು. ರೂ.90 ಚಿಲ್ಲರೆ ನೀಡುವುದು ನಿರ್ವಾಹಕಿಗೆ ದೊಡ್ಡದಾಗಿರಲಿಲ್ಲ. 2 ನಿಮಿಷಗಳ ಬಳಿಕ ನಿಲ್ದಾಣ ಬರುತ್ತಿದ್ದಂತೆಯೇ ಜೋರಾಗಿ ಬಸ್ ನಿಂದ ಇಳಿಯುವಂತೆ ಕೂಗಿದರು. ಅದೃಷ್ಟವೋ ಏನೋ ಬಸ್ ಇಳಿಯುತ್ತಿದ್ದಂತೆಯೇ ಮತ್ತೊಂದು ಬಸ್ ಸಿಕ್ಕಿತ್ತು. ಅಲ್ಲಿದ್ದ ಮತ್ತೊಬ್ಬ ಲೇಡಿ ಕಂಡೆಕ್ಟರ್ ರೂ.100ಕ್ಕೆ ಚಿಲ್ಲರೆ ಕೊಡ್ಡಿದ್ದರು ಎಂದು ರಿಚ್ಮಂಡ್ ಟೌನ್ ನಿವಾಸಿ ಆನಂದ್ ಡೆರಿಖ್ ಹೇಳಿದ್ದಾರೆ. 

ಈ ಬಗ್ಗೆ ಆನಂದ್ ಅವರು ತಮ್ಮ ಟ್ವಿಟರ್ ನಲ್ಲಿಯೂ ಬರೆದುಕೊಂಡಿದ್ದು, ಚಿಲ್ಲರೆ ಇಲ್ಲದ ಕಾರಣಕ್ಕೆ ನನ್ನನ್ನು ಬಸ್ ನಿಂದ ಕೆಳಗಿಳಿಸಲಾಯಿತು. ಚಿಲ್ಲರೆ ಪಡೆದುಕೊಳ್ಳಲು ಅಂಗಡಿಯೊಂದಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ಬಸ್ ಸಂಖ್ಯೆ ದಾಖಲಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ. 

ಐಐಎಸ್'ಸಿ ಸಿವಿಲ್ ಇಂಜಿನಿಯರಿಂಗ್, ಸಾರಿಗೆ ವ್ಯವಸ್ಥೆಗಳ ಇಂಜಿನಿಯರ್ ಸಹಾಯಕ ಪ್ರಾಧ್ಯಾಪಕ ಡಾ.ಆಶಿಶ್ ವರ್ಮಾ ಮಾತನಾಡಿ, ಇಂತಹ ಸಮಸ್ಯೆಗಳನ್ನು ನಿವಾರಿಸಲು ಮೊಬಿಲಿಟಿ ಕಾರ್ಡ್ ಉತ್ತಮವಾಗಿರುತ್ತದೆ ಎಂದು ತಿಳಿಸಿದ್ದಾರೆ. 

ಪ್ರಸಕ್ತ ಸಾಲಿನಲ್ಲಿ ಈವರೆಗೂ ಇದೇ ರೀತಿಯ 200 ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷ 662 ಪ್ರಕರಣಗಳು ದಾಖಲಾಗಿರುವುದಾಗಿ ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Eiffel Tower ಇನ್ನು ನೆನಪು ಮಾತ್ರ!: ಪ್ರಸಿದ್ಧ ಸ್ಮಾರಕವನ್ನು ಕೆಡವುತ್ತಿರುವುದೇಕೆ?

SCROLL FOR NEXT