ರಾಜ್ಯ

ಬೆಂಗಳೂರು: ವಾಹನ ಅಡ್ಡಗಟ್ಟಿ, ಹಲ್ಲೆ ನಡೆಸಿ ಸುಲಿಗೆ ಮಾಡುತ್ತಿದ್ದ ಮೂವರ ಬಂಧನ

Lingaraj Badiger

ಬೆಂಗಳೂರು: ಮಾರಕಾಸ್ತ್ರಗಳನ್ನು ಹಿಡಿದು ವಾಹನ ಸವಾರರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಅಪ್ರಾಪ್ತರು ಸೇರಿ, ಮೂವರು ಸುಲಿಗೆಕೋರರನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದು, ಅವರಿಂದ 11 ಲಕ್ಷ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪರಪ್ಪನ ಅಗ್ರಹಾರದ ಸಂದೀಪ್(18) ಹಾಗೂ 17 ವರ್ಷದ ಇಬ್ಬರು ಬಾಲಕರನ್ನು ಬಂಧಿಸಿ, ಮೂರು ದ್ವಿಚಕ್ರ ವಾಹನ, 8 ಮೊಬೈಲ್, 1 ಲ್ಯಾಪ್‌ಟಾಪ್ ಸೇರಿ, ಒಟ್ಟು 11 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ತಿಳಿಸಿದ್ದಾರೆ.

ಆರೋಪಿಗಳು ರಾತ್ರಿವೇಳೆ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಅವುಗಳಲ್ಲಿ ಸುತ್ತಾಡುತ್ತ ನಿರ್ಜನ ಪ್ರದೇಶಗಳಲ್ಲಿ ಸಂಚರಿಸುವ ವಾಹನ ಸವಾರರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ, ಸುಲಿಗೆ ಮಾಡಿ, ಕುಡಿತ, ಇನ್ನಿತರ ದುಶ್ಚಟಗಳಿಗೆ ಹಣ ವಿನಿಯೋಗಿಸಿ, ಮೋಜು ಮಾಡುತ್ತಿದ್ದರು. 

ಈ ಮೂವರು ಕುಡಿತ ಹಾಗೂ ಮೋಜಿಗಾಗಿ ಈ ಕೃತ್ಯವೆಸಗುತ್ತಿದ್ದರು ಎಂದು ಇಶಾ ಪಂತ್ ತಿಳಿಸಿದ್ದಾರೆ.

SCROLL FOR NEXT