ರಾಜ್ಯ

ನೇತ್ರಾವತಿ ನದಿಗೆ ಹಾರಿದ ತಾಯಿ, ಮಕ್ಕಳು: ಮನೆಯೊಡತಿಯನ್ನು ರಕ್ಷಿಸಿಲು ಯತ್ನಿಸಿದ ಸಾಕು ನಾಯಿ 

Nagaraja AB

ಮಂಗಳೂರು: ಕಳೆದ ರಾತ್ರಿ ಇಲ್ಲಿನ ನೇತ್ರಾವತಿ ನದಿಗೆ ಹಾರಿದ ಮೂವರ ಗುರುತು ಪತ್ತೆಯಾಗಿದ್ದು, ಮೈಸೂರು ಮೂಲದ ತಾಯಿ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡವರು ಎಂದು ಪೊಲೀಸರು ತಿಳಿಸಿದ್ದಾರೆ.

ಮೈಸೂರಿನ ವಿಜಯನಗರ ನಾಲ್ಕನೇ ಹಂತದ ನಿವಾಸಿಗಳಾದ ಕವಿತಾ (57) ಅವರ ಪುತ್ರ ಕೌಶಿಕ (29) ಹಾಗೂ ಪುತ್ರಿ ಕಲ್ಪನಾ (27) ಆತ್ಮಹತ್ಯೆ ಮಾಡಿಕೊಂಡವರು.

ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮೊದಲು ದಂಪತಿ ಮಗುವಿನೊಂದಿಗೆ ನದಿಗೆ ಹಾರಿರಬಹುದು ಎಂದು ಶಂಕಿಸಲಾಗಿತ್ತು. ನದಿಗೆ ಹಾರಿದ್ದನ್ನು ನೇರವಾಗಿ ಯಾರೂ ನೋಡಿರಲಿಲ್ಲ. ಆದರೆ, ದೂರದಲ್ಲಿದ್ದ ಸ್ಥಳೀಯರಿಗೆ ಶಬ್ದ ಕೇಳಿದ್ದು, ಅವರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಅವರ ಸಾಕು ನಾಯಿ ಹಾಗೂ ಸ್ಥಳೀಯರು ಮಹಿಳೆಯನ್ನು ರಕ್ಷಿಸಿದರಾದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.  ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

SCROLL FOR NEXT