ಸಾಂದರ್ಭಿಕ ಚಿತ್ರ 
ರಾಜ್ಯ

ನಂಜನಗೂಡು ಔಷಧ ಕಂಪನಿಯ ಸಿಬ್ಬಂದಿಗೆ ಕೊರೋನಾ ಸೋಂಕು: ಬಗೆಹರಿಯದ ನಿಗೂಢ ರಹಸ್ಯ

ನಂಜನಗೂಡಿನಲ್ಲಿರುವ ಔಷಧ ಕಂಪನಿಯ 12 ಸಿಬ್ಬಂದಿಯಲ್ಲಿ ಹೇಗೆ ಕೊರೋನಾ ಸೋಂಕು ಬಂದಿತು ಎಂಬದು ವೈದ್ಯರು ಮತ್ತು ಅಧಿಕಾರಿಗಳಿಗೆ ಯಕ್ಷ ಪ್ರಶ್ನೆಯಾಗಿದೆ.

ಮೈಸೂರು: ನಂಜನಗೂಡಿನಲ್ಲಿರುವ ಔಷಧ ಕಂಪನಿಯ 12 ಸಿಬ್ಬಂದಿಯಲ್ಲಿ ಹೇಗೆ ಕೊರೋನಾ ಸೋಂಕು ಬಂದಿತು ಎಂಬದು ವೈದ್ಯರು ಮತ್ತು ಅಧಿಕಾರಿಗಳಿಗೆ ಯಕ್ಷ ಪ್ರಶ್ನೆಯಾಗಿದೆ.

ಜುಬಿಲೆಂಟ್ ಜೆನರಿಕ್ಸ್ ನ 12 ಮಂದಿ ಕೆಲಸಗಾರರಲ್ಲಿ ಇಬ್ಬರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ, ಯಾವುದೇ ವಿದೇಶ ಪ್ರಯಾಣ ಮಾಡದಿದ್ದರೂ 52 ವರ್ಷದ ವೃದ್ಧ ಹಾಗೂ 35 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡು ಬಂದಿದೆ.

ಶನಿವಾರ ನಂಜನಗೂಡನ್ನು ಸರ್ಕಾರ ಕ್ಲಸ್ಟರ್ ಡೌನ್ ಎಂದು ಘೋಷಿಸಿದೆ, 52 ಮಂದಿ ಪ್ರಾಥಮಿಕ ಸಂಪರ್ಕದಲ್ಲಿದ್ದರು ಎಂದು ಜಿಲ್ಲಾಡಳಿತ ತಿಳಿಸಿದ್ದು ಅವರನ್ನು ಪ್ರತ್ಯೇಕವಾಗಿಡಲಾಗಗಿತ್ತು, ಆದರೆ ಉಳಿದ ಐವರು ಯಾವುದೇ ಸಾಮಾಜಿಕ ಸಂಪರ್ಕದಲ್ಲಿರಲಿಲ್ಲ,  ಆಶ್ಚರ್ಯವೆಂದರೇ ಸೋಂಕಿತರ ಕುಟುಂಬಸ್ಥರಲ್ಲಿ ಯಾರೋಬ್ಬರಿಗೂ ಸೋಂಕು ತಗುಲಿಲ್ಲ.

ಮೊದಲ ಕೊರೋನಾ ಸೋಂಕಿತನ ಜೊತೆ ಈ ಸಿಬ್ಬಂದಿ ಯಾರೂ ಸಂಪರ್ಕದಲ್ಲಿರಲಿಲ್ಲ, ಆಧರೂ ಇವರಿಗೆ ಹೇಗೆ ಸೋಂಕು ತಗುಲಿತು ಎಂಬುದು ಇನ್ನೂ ನಿಗೂಢ ಎಂದು ಅಧಿಕಾರಿಗಳು ಆತಂಕ ವ್ಯಕ್ತ ಪಡಿಸಿದ್ದಾರೆ.ಈ ಕೇಸ್ ವಿಶ್ವ ಆರೋಗ್ಯ ಸಂಸ್ಥೆಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನುವಾಗ ಜನರು ಹೊರಸೂಸುವ ಉಸಿರಾಟದ ಹನಿಗಳಿಗೆ ಬಾಯಿ, ಮೂಗು ಮತ್ತು ಕಣ್ಣುಗಳು ಒಡ್ಡಿಕೊಂಡಾಗ ಜನರು ಕೋವಿಡ್ -19 ಅನ್ನು ಸಂಕುಚಿತಗೊಳಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತಿರುವುದರಿಂದ ಈ  ಈ ಪ್ರಕರಣ ಮತ್ತಷ್ಟು ಗೊಂದಲಮಯವಾಗಿದೆ. ಸೋಂಕಿತ ವ್ಯಕ್ತಿಯು ಬಳಸುವ ವಸ್ತುಗಳೊಂದಿಗೆ ಪರೋಕ್ಷ ಸಂಪರ್ಕದಿಂದಲೂ ಕೋವಿದ್ 19 ಹರಡಬಹುದು ಎಂದು ಹೇಳಲಾಗಿದೆ.

ಜುಬಿಲೆಂಟ್ ಜೆನರಿಕ್ಸ್ ಕಾರ್ಖಾನೆ ಚೀನಾ ಸೇರಿದಂತೆ ಕೊರೋನಾ ಪೀಡಿತ ದೇಶಗಳಿಂದ ಔಷಧೀಯ ಸರಕುಗಳನ್ನು ಆಮದು ಮಾಡಿಕೊಂಡಿದೆ, ಆ ಮೂಲಕ ಈ ಸಿಬ್ಬಂದಿಗೆ ಸೋಂಕು ಹರಡಿರಬಹುದೆಂದು  ಮೈಸೂರು ಡಿಸಿ ಅಭಿರಾಮ್ ಶಂಕರ್ ತಿಳಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Nepal: 80 ಸೇತುವೆಗಳು ಹಾನಿ, 40 ಕಿ.ಮೀ ರಸ್ತೆಗಳು ನಾಶ