ಗದಗ: ಎಣ್ಣೆ ಅಂಗಡಿ ತೆರೆಯಲಿದೆ ಎಂಬ ವದಂತಿ ನಂಬಿ ಏಪ್ರಿಲ್ ಫೂಲ್ ಆದ ಮದ್ಯವ್ಯಸನಿಗಳು! 
ರಾಜ್ಯ

ಗದಗ: ಎಣ್ಣೆ ಅಂಗಡಿ ತೆರೆಯಲಿದೆ ಎಂಬ ವದಂತಿ ನಂಬಿ ಏಪ್ರಿಲ್ ಫೂಲ್ ಆದ ಮದ್ಯವ್ಯಸನಿಗಳು!

ಏಪ್ರಿಲ್ 1ನ್ನು ಸಾಮಾನ್ಯವಾಗಿ ಮೂರ್ಖರ ದಿನವೆಂದು ಆಚರಿಸಲಾಗುತ್ತದೆ. ಆದರೆ ಗದಗ ಜಿಲ್ಲೆಯ ಕೆಲ ಮದ್ಯಪ್ರಿಯರು ಮಾತ್ರ ಇಂದು ವದಂತಿಗಳನ್ನು ನಂಬಿ ನಿಜಕ್ಕೂ ಮೂರ್ಖರಾಗಿದ್ದಾರೆ.. 

ಗದಗ: ಏಪ್ರಿಲ್ 1ನ್ನು ಸಾಮಾನ್ಯವಾಗಿ ಮೂರ್ಖರ ದಿನವೆಂದು ಆಚರಿಸಲಾಗುತ್ತದೆ. ಆದರೆ ಗದಗ ಜಿಲ್ಲೆಯ ಕೆಲ ಮದ್ಯಪ್ರಿಯರು ಮಾತ್ರ ಇಂದು ವದಂತಿಗಳನ್ನು ನಂಬಿ ನಿಜಕ್ಕೂ ಮೂರ್ಖರಾಗಿದ್ದಾರೆ.. 

ದೇಶಾದ್ಯಂತ ಏಪ್ರಿಲ್14ರವರೆಗೆ ಕೊರೋನಾ ಕಾರಣಕ್ಕೆ ಲಾಕ್ ಡೌನ್ ಆಗಿದ್ದು ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಿದೆ. ಹಾಗಿದ್ದು ಗದಗ ನಗರದ ಕೆಲವೊಬ್ಬರು ಏಪ್ರಿಲ್ 1ರಂದು ಕೆಲ ಗಂಟೆಗಳ ಕಾಲ ಮದ್ಯದ ಅಂಗಡಿಗಳು ತೆರೆಯಲಿದೆ ಎಂಬ ವದಂತಿಗಳನ್ನು ನಂಬಿ ಮುಳಗುಂದ ರಸ್ತೆಯ ಎಂಎಸ್‍ಐಎಲ್ ಮದ್ಯದಂಗಡಿ ಮುಂದೆ ಸರದಿ ಸಾಲಿನಲ್ಲಿ ಕಾಯುತ್ತಾ ನಿಂತಿದ್ದರು.

ಸಾಮಾಜಿಕ ತಾಣಗಳಲ್ಲಿ ಹರಿದಾಡಿದ್ದ ಸುಳ್ಲು ಸುದ್ದಿಯನ್ನು ನಂಬಿ ನೂರಾರು ಜನರು ಮದ್ಯದ ಮಳಿಗೆ ಮುಂದೆ ಜಮಾಯಿಸಿದ್ದರು. ಸರತಿ ಸಾಲಲ್ಲಿ ನಿಂತವರ ಪೈಕಿ ಓರ್ವ ಮಹಿಳೆಯೂ ಇದ್ದದ್ದು ವಿಶೇಷವಾಗಿತ್ತು. ಆದರೆ ಎಷ್ಟು ಸಮಯವಾದರೂ ಅಂಗಡಿ ಮಾತ್ರ ತೆರೆಯಲಿಲ್ಲ. ಕಡೆಗೆ ಜನ ಗುಂಪು ಸೇರಿದ್ದನ್ನು ಗಮನಿಸಿದ ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕಾಗಮಿಸಿ ಎಚ್ಚರಿಸಿದ್ದಾರೆ. ಆ ತಕ್ಷಣ ಅಲ್ಲಿ ಸೇರಿದ್ದವರೆಲ್ಲಾ ಮತ್ತೆ ತಮ್ಮ ತಮ್ಮ ಮನೆಯತ್ತ ಪಾದ ಬೆಳೆಸಿದ್ದರು.

ಒಟ್ತಾರೆ ವದಂತಿ, ಸುಳ್ಳು ಮಾಹಿತಿಯನ್ನು ನಂಬಿದ ಮದ್ಯಪ್ರಿಯರಿಗೆ ಇಂದು ಏಪ್ರಿಲ್ ಫೂಲ್ ಆಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಿರಿಯ ನಾಯಕರೊಂದಿಗಿನ ಚರ್ಚೆ ಬಳಿಕ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ: ದೆಹಲಿಗೆ ತೆರಳುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ತಮಿಳು ನಾಡು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ TVK ಪಕ್ಷ ಸೇರಿದ ಸೆಂಗೊಟ್ಟೈಯನ್

ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನಿಸಿದರೆ ಡಿಕೆಶಿಯನ್ನು CM ಆಗಿ ಒಪ್ಪಿಕೊಳ್ಳುವೆ : ಕುರ್ಚಿ ಕದನಕ್ಕೆ ಪರಮೇಶ್ವರ್ ಟ್ವಿಸ್ಟ್

CM ಪಟ್ಟಕ್ಕಾಗಿ ಕಿತ್ತಾಟ: ಡಿಕೆಶಿಗೆ 'ಹೈಕಮಾಂಡ್' ಒಲವು ತೋರಿದ್ರೆ, ಸಿದ್ದರಾಮಯ್ಯರ ಮುಂದಿನ ಪ್ಲಾನ್ ಏನು?

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ನಲ್ಲಿ ಸೋಲು: ಮುಖ್ಯ ಕೋಚ್ ಹುದ್ದೆಯಿಂದ ಗಂಭೀರ್ ವಜಾ ಸಾಧ್ಯತೆ, BCCI ಹೇಳಿದ್ದೇನು?

SCROLL FOR NEXT