ಗದಗ: ಎಣ್ಣೆ ಅಂಗಡಿ ತೆರೆಯಲಿದೆ ಎಂಬ ವದಂತಿ ನಂಬಿ ಏಪ್ರಿಲ್ ಫೂಲ್ ಆದ ಮದ್ಯವ್ಯಸನಿಗಳು! 
ರಾಜ್ಯ

ಗದಗ: ಎಣ್ಣೆ ಅಂಗಡಿ ತೆರೆಯಲಿದೆ ಎಂಬ ವದಂತಿ ನಂಬಿ ಏಪ್ರಿಲ್ ಫೂಲ್ ಆದ ಮದ್ಯವ್ಯಸನಿಗಳು!

ಏಪ್ರಿಲ್ 1ನ್ನು ಸಾಮಾನ್ಯವಾಗಿ ಮೂರ್ಖರ ದಿನವೆಂದು ಆಚರಿಸಲಾಗುತ್ತದೆ. ಆದರೆ ಗದಗ ಜಿಲ್ಲೆಯ ಕೆಲ ಮದ್ಯಪ್ರಿಯರು ಮಾತ್ರ ಇಂದು ವದಂತಿಗಳನ್ನು ನಂಬಿ ನಿಜಕ್ಕೂ ಮೂರ್ಖರಾಗಿದ್ದಾರೆ.. 

ಗದಗ: ಏಪ್ರಿಲ್ 1ನ್ನು ಸಾಮಾನ್ಯವಾಗಿ ಮೂರ್ಖರ ದಿನವೆಂದು ಆಚರಿಸಲಾಗುತ್ತದೆ. ಆದರೆ ಗದಗ ಜಿಲ್ಲೆಯ ಕೆಲ ಮದ್ಯಪ್ರಿಯರು ಮಾತ್ರ ಇಂದು ವದಂತಿಗಳನ್ನು ನಂಬಿ ನಿಜಕ್ಕೂ ಮೂರ್ಖರಾಗಿದ್ದಾರೆ.. 

ದೇಶಾದ್ಯಂತ ಏಪ್ರಿಲ್14ರವರೆಗೆ ಕೊರೋನಾ ಕಾರಣಕ್ಕೆ ಲಾಕ್ ಡೌನ್ ಆಗಿದ್ದು ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಿದೆ. ಹಾಗಿದ್ದು ಗದಗ ನಗರದ ಕೆಲವೊಬ್ಬರು ಏಪ್ರಿಲ್ 1ರಂದು ಕೆಲ ಗಂಟೆಗಳ ಕಾಲ ಮದ್ಯದ ಅಂಗಡಿಗಳು ತೆರೆಯಲಿದೆ ಎಂಬ ವದಂತಿಗಳನ್ನು ನಂಬಿ ಮುಳಗುಂದ ರಸ್ತೆಯ ಎಂಎಸ್‍ಐಎಲ್ ಮದ್ಯದಂಗಡಿ ಮುಂದೆ ಸರದಿ ಸಾಲಿನಲ್ಲಿ ಕಾಯುತ್ತಾ ನಿಂತಿದ್ದರು.

ಸಾಮಾಜಿಕ ತಾಣಗಳಲ್ಲಿ ಹರಿದಾಡಿದ್ದ ಸುಳ್ಲು ಸುದ್ದಿಯನ್ನು ನಂಬಿ ನೂರಾರು ಜನರು ಮದ್ಯದ ಮಳಿಗೆ ಮುಂದೆ ಜಮಾಯಿಸಿದ್ದರು. ಸರತಿ ಸಾಲಲ್ಲಿ ನಿಂತವರ ಪೈಕಿ ಓರ್ವ ಮಹಿಳೆಯೂ ಇದ್ದದ್ದು ವಿಶೇಷವಾಗಿತ್ತು. ಆದರೆ ಎಷ್ಟು ಸಮಯವಾದರೂ ಅಂಗಡಿ ಮಾತ್ರ ತೆರೆಯಲಿಲ್ಲ. ಕಡೆಗೆ ಜನ ಗುಂಪು ಸೇರಿದ್ದನ್ನು ಗಮನಿಸಿದ ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕಾಗಮಿಸಿ ಎಚ್ಚರಿಸಿದ್ದಾರೆ. ಆ ತಕ್ಷಣ ಅಲ್ಲಿ ಸೇರಿದ್ದವರೆಲ್ಲಾ ಮತ್ತೆ ತಮ್ಮ ತಮ್ಮ ಮನೆಯತ್ತ ಪಾದ ಬೆಳೆಸಿದ್ದರು.

ಒಟ್ತಾರೆ ವದಂತಿ, ಸುಳ್ಳು ಮಾಹಿತಿಯನ್ನು ನಂಬಿದ ಮದ್ಯಪ್ರಿಯರಿಗೆ ಇಂದು ಏಪ್ರಿಲ್ ಫೂಲ್ ಆಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT