ಗದಗ: ಎಣ್ಣೆ ಅಂಗಡಿ ತೆರೆಯಲಿದೆ ಎಂಬ ವದಂತಿ ನಂಬಿ ಏಪ್ರಿಲ್ ಫೂಲ್ ಆದ ಮದ್ಯವ್ಯಸನಿಗಳು! 
ರಾಜ್ಯ

ಗದಗ: ಎಣ್ಣೆ ಅಂಗಡಿ ತೆರೆಯಲಿದೆ ಎಂಬ ವದಂತಿ ನಂಬಿ ಏಪ್ರಿಲ್ ಫೂಲ್ ಆದ ಮದ್ಯವ್ಯಸನಿಗಳು!

ಏಪ್ರಿಲ್ 1ನ್ನು ಸಾಮಾನ್ಯವಾಗಿ ಮೂರ್ಖರ ದಿನವೆಂದು ಆಚರಿಸಲಾಗುತ್ತದೆ. ಆದರೆ ಗದಗ ಜಿಲ್ಲೆಯ ಕೆಲ ಮದ್ಯಪ್ರಿಯರು ಮಾತ್ರ ಇಂದು ವದಂತಿಗಳನ್ನು ನಂಬಿ ನಿಜಕ್ಕೂ ಮೂರ್ಖರಾಗಿದ್ದಾರೆ.. 

ಗದಗ: ಏಪ್ರಿಲ್ 1ನ್ನು ಸಾಮಾನ್ಯವಾಗಿ ಮೂರ್ಖರ ದಿನವೆಂದು ಆಚರಿಸಲಾಗುತ್ತದೆ. ಆದರೆ ಗದಗ ಜಿಲ್ಲೆಯ ಕೆಲ ಮದ್ಯಪ್ರಿಯರು ಮಾತ್ರ ಇಂದು ವದಂತಿಗಳನ್ನು ನಂಬಿ ನಿಜಕ್ಕೂ ಮೂರ್ಖರಾಗಿದ್ದಾರೆ.. 

ದೇಶಾದ್ಯಂತ ಏಪ್ರಿಲ್14ರವರೆಗೆ ಕೊರೋನಾ ಕಾರಣಕ್ಕೆ ಲಾಕ್ ಡೌನ್ ಆಗಿದ್ದು ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಿದೆ. ಹಾಗಿದ್ದು ಗದಗ ನಗರದ ಕೆಲವೊಬ್ಬರು ಏಪ್ರಿಲ್ 1ರಂದು ಕೆಲ ಗಂಟೆಗಳ ಕಾಲ ಮದ್ಯದ ಅಂಗಡಿಗಳು ತೆರೆಯಲಿದೆ ಎಂಬ ವದಂತಿಗಳನ್ನು ನಂಬಿ ಮುಳಗುಂದ ರಸ್ತೆಯ ಎಂಎಸ್‍ಐಎಲ್ ಮದ್ಯದಂಗಡಿ ಮುಂದೆ ಸರದಿ ಸಾಲಿನಲ್ಲಿ ಕಾಯುತ್ತಾ ನಿಂತಿದ್ದರು.

ಸಾಮಾಜಿಕ ತಾಣಗಳಲ್ಲಿ ಹರಿದಾಡಿದ್ದ ಸುಳ್ಲು ಸುದ್ದಿಯನ್ನು ನಂಬಿ ನೂರಾರು ಜನರು ಮದ್ಯದ ಮಳಿಗೆ ಮುಂದೆ ಜಮಾಯಿಸಿದ್ದರು. ಸರತಿ ಸಾಲಲ್ಲಿ ನಿಂತವರ ಪೈಕಿ ಓರ್ವ ಮಹಿಳೆಯೂ ಇದ್ದದ್ದು ವಿಶೇಷವಾಗಿತ್ತು. ಆದರೆ ಎಷ್ಟು ಸಮಯವಾದರೂ ಅಂಗಡಿ ಮಾತ್ರ ತೆರೆಯಲಿಲ್ಲ. ಕಡೆಗೆ ಜನ ಗುಂಪು ಸೇರಿದ್ದನ್ನು ಗಮನಿಸಿದ ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕಾಗಮಿಸಿ ಎಚ್ಚರಿಸಿದ್ದಾರೆ. ಆ ತಕ್ಷಣ ಅಲ್ಲಿ ಸೇರಿದ್ದವರೆಲ್ಲಾ ಮತ್ತೆ ತಮ್ಮ ತಮ್ಮ ಮನೆಯತ್ತ ಪಾದ ಬೆಳೆಸಿದ್ದರು.

ಒಟ್ತಾರೆ ವದಂತಿ, ಸುಳ್ಳು ಮಾಹಿತಿಯನ್ನು ನಂಬಿದ ಮದ್ಯಪ್ರಿಯರಿಗೆ ಇಂದು ಏಪ್ರಿಲ್ ಫೂಲ್ ಆಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶನಿವಾರ ಶಾಸಕಾಂಗ ಪಕ್ಷದ ಸಭೆ, ತದನಂತರ ನೂತನ ಸಿಎಂ ಪದಗ್ರಹಣ ಸಾಧ್ಯತೆ!

Karnataka CM News LIVE Updates | ಸಿದ್ದರಾಮಯ್ಯ ರಾಜೀನಾಮೆ; ಸಿಎಲ್‌ಪಿ ಸಭೆ ಶನಿವಾರ; ಅಂದೇ ನೂತನ ಸಿಎಂ ಪ್ರಮಾಣ ವಚನ ಸಾಧ್ಯತೆ!

ವಿದಾಯದ ಕೊನೇ ಕ್ಷಣದಲ್ಲೂ Siddaramaiah ಮಹತ್ವದ ಕ್ರಮ: ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ ವರ್ಗಾವಣೆ

ನಿಮ್ಮ ಪ್ರೀತಿಗೆ ಧನ್ಯವಾದ: ರಾಜೀನಾಮೆ ನೀಡಿದ ಬಳಿಕ ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಭಾವುಕ ಪೋಸ್ಟ್!

ಸೌದಿಯಲ್ಲಿ ಗಲ್ಲು ಶಿಕ್ಷೆ: 20 ವರ್ಷಗಳ ಬಳಿಕ ಕೊನೆಗೂ ತಾಯಿಯ ಮಡಿಲು ಸೇರಿದ ಕೇರಳ ವ್ಯಕ್ತಿ, 28 ದಿನಗಳಲ್ಲೇ ಬದಲಾದ ಬದುಕು, ಅತೀ ದೊಡ್ಡ ಕ್ರೌಡ್ ಫಂಡಿಂಗ್ ಅಭಿಯಾನ!

SCROLL FOR NEXT