ಕರೋನಾ ಲಾಕ್‌ಡೌನ್ ನಡುವೆ ನಿರಾಶ್ರಿತ ನಾರಿಗೆ ಹುಬ್ಬಳ್ಳಿ ಪೋಲೀಸರ ನೆರವಿನ ಹಸ್ತ 
ರಾಜ್ಯ

ಕೊರೋನಾ ಲಾಕ್‌ಡೌನ್ ನಡುವೆ ನಿರಾಶ್ರಿತ ನಾರಿಗೆ ಹುಬ್ಬಳ್ಳಿ ಪೋಲೀಸರ ನೆರವಿನ ಹಸ್ತ

ದೇಶಾದ್ಯಂತ ಕೊರೋನಾ ಲಾಕ್ ಡೌನ್ ಕಾರಣ ದಿನಗೂಲಿಗಳು, ಬಡವರು ತೊಂದರೆಗೀಡಾಗಿದ್ದಾರೆ. ಈ ಸಮಯದಲ್ಲಿ ಪೋಲೀಸರು ಇಂತಹವರ ಸಹಾಯಕ್ಕೆ ಬರುತ್ತಿದ್ದಾರೆ. ಶುಕ್ರವಾರ  ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿ  ಬೀದಿಯಲ್ಲಿ ತಂಗಿದ್ದ ಮಹಿಳೆಯೊಬ್ಬರಿಗೆ ಮಹಿಳಾ ಪೊಲೀಸರು ಸ್ನಾನ  ಮಾಡಿಸಿದ್ದಾರೆ.

ಹುಬ್ಬಳ್ಳಿ: ದೇಶಾದ್ಯಂತ ಕೊರೋನಾ ಲಾಕ್ ಡೌನ್ ಕಾರಣ ದಿನಗೂಲಿಗಳು, ಬಡವರು ತೊಂದರೆಗೀಡಾಗಿದ್ದಾರೆ. ಈ ಸಮಯದಲ್ಲಿ ಪೋಲೀಸರು ಇಂತಹವರ ಸಹಾಯಕ್ಕೆ ಬರುತ್ತಿದ್ದಾರೆ. ಶುಕ್ರವಾರ  ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿ  ಬೀದಿಯಲ್ಲಿ ತಂಗಿದ್ದ ಮಹಿಳೆಯೊಬ್ಬರಿಗೆ ಮಹಿಳಾ ಪೊಲೀಸರು ಸ್ನಾನ  ಮಾಡಿಸಿದ್ದಾರೆ.

ತೊಂದರೆಯಲ್ಲಿದ್ದ ಮಹಿಳೆ ಸುಮಾರು ಎರಡು ವಾರಗಳಿಂದ ಸ್ನಾನ ಮಾಡಿರಲಿಲ್ಲ. ಕೊರೋನಾ ಲಾಕ್ ಡೌನ್ ಕಾರಣ ಭಾರತೀಯ ರೈಲ್ವೆ ತನ್ನೆಲ್ಲಾ ರೈಲು ಕಾರ್ಯಾಚರಣೆಯನ್ನು ಸ್ಥಗಿತವನ್ನಾಗಿಸಿದೆ.  ಇದರ ಪರಿಣಾಮವಾಗಿ ಯಾವುದೇ ಜನರು ನಿಲ್ದಾಣಕ್ಕೆ ಭೇಟಿ ನೀಡುತ್ತಿಲ್ಲ ಮತ್ತು ಯಾರಿಂದಲೂ ಆಕೆಗೆ ಸಹಾಯ ಸಿಗುತ್ತಿಲ್ಲ.

ಮಹಿಳೆ ರೈಲ್ವೆ ನಿಲ್ದಾಣದ ಬಳಿ ಹಲವು ದಿನಗಳಿಂದ ತಂಗಿದ್ದು ಊಟಕ್ಕಾಗಿ ಗೋಗೆರೆಯುತ್ತಿದ್ದಳು. ರೈಲು ಸೇವೆಗಳು ಸ್ಥಗಿತಗೊಂಡ ನಂತರ ಮತ್ತು ಹೋಟೆಲ್‌ಗಳು ಮುಚ್ಚಿದ ನಂತರ, ಅವಳು ಸರಿಯಾಗಿ ಆಹಾರವನ್ನು ಸೇವಿಸಿರಲಿಲ್ಲ. ಇದನ್ನು ಗಮನಿಸಿದಪೋಲೀಸ್ ಅಧಿಕಾರಿಗಳು ಈ ವಿಷಯವನ್ನು ತಮ್ಮ ಠಾನಾಧಿಕಾರಿಗಳಿಗೆ ಹೇಳಿದ್ದಾರೆ.ಆ ನಂತರ ಕೆಲ ಮಹಿಳಾ ಅಪೋಲೀಸರು ಸಂತ್ರಸ್ಥೆಯಿದ್ದ ಸ್ಥಳಕ್ಕೆ ಆಗಮಿಸಿದ್ದಾರೆ.

ಸಹಾಯಕ ಸಬ್ ಇನ್ಸ್‌ಪೆಕ್ಟರ್ ಎಲಿಜಬೆತ್ಪೊತಗೋಳಿಹೋಮ್ ಗಾರ್ಡ್ ಕಾನ್‌ಸ್ಟೆಬಲ್ ಎಸ್‌.ಎಚ್. ​​ಕಲ್ಲಿ ಜತೆಯಾಗಿ ಸ್ಥಳಕ್ಕೆ ಭೇಟಿ ನೀಡಿ ನೆಲೆಯಿಲ್ಲದ ಮಹಿಳೆಯೊಂದಿಗೆ ಮಾತನಾಡಿದ್ದಾರೆ "ಅವಳು ಮಾನಸಿಕವಾಗಿ ಸ್ಥಿರವಾಗಿದ್ದಳು ಆದರೆ ಕಾಲು ನೋವಿನ ಕಾರಣ ನಡೆಯಲು ಸಾಧ್ಯವಾಗುತ್ತಿರಲಿಲ್ಲ. . ನಾವು ಅವಳಿಗೆ ಸ್ನಾನ ಮಾಡಿಸಿ ಬಟ್ಟೆ, ಔಷಧಿ  ಆಹಾರ ಮತ್ತು ಮಾಸ್ಕ್ ನೀಡಿದ್ದೇವೆ. ನಾವು ಅದನ್ನು ಸಂಬಂಧಪಟ್ಟ ಇಲಾಖೆಗೆ ತಿಳಿಸಿದ್ದೇವೆ ಇದೀಗ ಆಕೆಯನ್ನು ನಗರದ  ಪುನರ್ವಸತಿ ಕೇಂದ್ರ,ಕ್ಕೆ ಸ್ಥಳಾಂತರಿಸಲಾಗುತ್ತದೆ" "ಅವರು ಹೇಳಿದರು.

ನಗರದಲ್ಲಿ ಕೊರೋನಾವೈರಸ್  ಭಯದ ಸಮಯದಲ್ಲಿ ಪೊಲೀಸರ ಕೃತ್ಯವನ್ನು ಜನರು ಮೆಚ್ಚಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT