ರಾಜ್ಯ

ಕೊಪ್ಪಳ: ಎಣ್ಣೆ ಸಿಗದಿದ್ದಕ್ಕೆ ಬಾರ್‌ಗೆ ಕನ್ನ ಹಾಕಿದ ಕುಡುಕರು!

Nagaraja AB

ಕೊಪ್ಪಳ: ಕೊರೋನಾ ವೈರಸ್  ಹರಡದಂತೆ ತಡೆಯುವ ನಿಟ್ಟಿನಲ್ಲಿ 21 ದಿನಗಳ ಕಾಲ ಲಾಕ್ ಡೌನ್ ಜಾರಿಯಾಗಿದ್ದು, ಕುಡುಕರಿಗೆ ಎಣ್ಣೆ ಸಿಗದಂತಾಗಿದೆ.  ಇದರಿಂದ ಕಂಗೆಟ್ಟಂತಾಗಿರುವ ಕುಡುಕರು ಕೊಪ್ಪಳದಲ್ಲಿ ಬಾರ್ ಗೆ ಕನ್ನ ಹಾಕಿ, ಸಾವಿರಾರು ಮೌಲ್ಯದ ಮದ್ಯ ಕದ್ದು ಪರಾರಿಯಾಗಿದ್ದಾರೆ.

ಆರ್. ಮೋಹನಗೌಡ ಸನ್ನದುದಾರರಾಗಿರುವ  ಕೊಪ್ಪಳದ ಗವಿ ಮಠ ರಸ್ತೆಯ ಶ್ರೀ ಸಾಯಿ ಟ್ರೇಡರ್ಸ್ ಮಳಿಗೆಗೆ ಕನ್ನಹಾಕಲಾಗಿದೆ. ಅಂಗಡಿಯ ಹಿಂಬದಿ ಬೀಗ ಮುರಿದು ಬಾಗಿಲು ಸುಟ್ಟು ಒಳ ನುಗ್ಗಿರುವ ಕಳ್ಳರು 8 ಪಿಎಂ, ಕಿಂಗ್‌ಫಿಶರ್ ಸ್ಟೋರ್ಮ್ ಸೇರಿದಂತೆ ಸಾವಿರಾರು ರೂ. ಮೌಲ್ಯದ ಮದ್ಯ ಕದ್ದು ಪರಾರಿಯಾಗಿದ್ದಾರೆ.

ಗಲ್ಲಾಪೆಟ್ಟಿಗೆಯಲ್ಲಿ ಸಾವಿರಾರು ರೂಪಾಯಿ ಹಣ ಇದ್ದರೂ  ಅದನ್ನು ಮುಟ್ಟದ ಕಳ್ಳರು, ಕೇವಲ ಮದ್ಯ ಕದ್ದು ಅಲ್ಲಿಂದ ಕಾಲ್ಕಿತ್ತಿದ್ದಾರೆ.ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. 

SCROLL FOR NEXT