ರಾಜ್ಯ

ರೈತರ ಉತ್ಪನ್ನ ಹಾಳಾಗುವುದು ಬೇಡ, ಖರೀದಿಸಿ ಬಡವರಿಗೆ ಉಚಿತವಾಗಿ ಹಂಚಲು ಜನಪ್ರತಿನಿಧಿಗಳಿಗೆ ಡಿಕೆಶಿ ಮನವಿ

Vishwanath S

ಬೆಂಗಳೂರು: ರೈತರ ಉತ್ಪನ್ನ ಖರೀದಿಸಿ ಬಡವರಿಗೆ ಉಚಿತವಾಗಿ ಹಂಚಲು  ಜನಪ್ರತಿನಿಧಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಮನವಿ ಮಾಡಿದ್ದಾರೆ.

ರೈತರು  ತಮ್ಮ ಹೊಲಗಳಲ್ಲಿ ಬೆಳೆದಿರುವ ಸೊಪ್ಪು, ಹಣ್ಣು, ತರಕಾರಿಗಳನ್ನು ಮಾರುಕಟ್ಟೆಯಲ್ಲಿ  ಖರೀದಿಸದ ಪರಿಣಾಮ ಬೆಳೆಗಳೆಲ್ಲಾ ಹಾಳಾಗುತ್ತಿವೆ. ಈ ಸಂದರ್ಭದಲ್ಲಿ ರಾಜ್ಯದ ಎಲ್ಲ  ಸಂಸದರು, ಶಾಸಕರುಗಳು, ಎಲ್ಲ ರಾಜಕೀಯ ಪಕ್ಷಗಳ ನಾಯಕರು, ಜನಪ್ರತಿನಿಧಿಗಳು,  ಪದಾಧಿಕಾರಿಗಳು, ಕಾರ್ಯಕರ್ತರು ಅವರವರ ಕ್ಷೇತ್ರಗಳಲ್ಲಿ ಹಾಗೂ ಜಿಲ್ಲೆಗಳಲ್ಲಿ ರೈತರು  ಬೆಳೆದಿರುವ ಹಣ್ಣು, ತರಕಾರಿ ಹಾಗೂ ಸೊಪ್ಪುಗಳನ್ನು ಮಾರುಕಟ್ಟೆ ದರದಲ್ಲಿ ಖರೀದಿಸಿ  ಬಡವರಿಗೆ ಉಚಿತವಾಗಿ ಹಂಚಬೇಕು ಎಂದು ಶಿವಕುಮಾರ್ ಹೇಳಿದ್ದಾರೆ.

ರೈತರ ಬೆಳೆಗಳ ಖರೀದಿ  ಪಕ್ಷಾತೀತವಾಗಿ ನಡೆಯಬೇಕು.ಇದಕ್ಕೆ ಎಲ್ಲ ಪಕ್ಷದವರೂ ಕೈ ಜೋಡಿಸಬೇಕು. ಇದರಲ್ಲಿ ಯಾವುದೇ  ರಾಜಕೀಯ ಹುಡುಕಬಾರದು. ರೈತರ ಸೇವೆಗೆ ನಾವೆಲ್ಲರೂ ಬದ್ಧರಾಗಿರಬೇಕು.

SCROLL FOR NEXT