ರಾಜ್ಯ

ಹರಿಕಥಾ ವಿದ್ವಾನ್ ಶೋಭಾ ನಾಯ್ಡು ವಿಧಿವಶ

Vishwanath S

ಬೆಂಗಳೂರು: ಮೂರು ದಶಕಕ್ಕೂ ಹೆಚ್ಚು ಕಾಲ ಕಲಾ ಸೇವೆ ಮಾಡಿದ್ದ ಹರಿಕಥಾ ವಿದ್ವಾಂಸ ಗುರುರಾಜುಲು ನಾಯ್ಡು ಅವರ ಪುತ್ರಿ ಶೋಭಾ ನಾಯ್ಡು ಅವರು ವಿಧಿವಶರಾಗಿದ್ದಾರೆ.

ತಂದೆ ಗುರುರಾಜುಲು ನಾಯ್ಡು ಅವರ ವಿರೋಧದ ನಡುವೆಯೂ ಶೋಭಾ ನಾಯ್ಡು ಅವರು ಹರಿಕಥೆ ಮಾಡುವುದನ್ನು ಬಿಟ್ಟಿರಲಿಲ್ಲ. ಇನ್ನು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲವೇ ಕೆಲ ಸಂಬಂಧಿಕರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಇನ್ನು ಶೋಭಾ ನಾಯ್ಡು ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಗುರುರಾಜುಲು ನಾಯ್ಡು ಅವರ ನಿಧನದ ಬಳಿಕ ಶೋಭಾ ನಾಯ್ಡು ಅವರು ಬೆಂಗಳೂರಿಗೆ ಬಂದರು. ಭಾರತೀಯ ವಿಮಾನ ಕಾರ್ಖಾನೆಯಲ್ಲಿ ನೌಕರಿಗೆ ಸೇರಿದರು. ಸಮಯ ಸಿಕ್ಕಾಗ ಹರಿಕಥೆ ಮಾಡುತ್ತಾ ಜೊತೆಗೆ ನಾಟಕಗಳಲ್ಲಿಯೂ ಅಭಿನಯಿಸಿದ್ದರು.

SCROLL FOR NEXT